ವಿಜಯಪುರ: 30 ಲಕ್ಷ ಹಣಕ್ಕಾಗಿ ತಂದೆಯನ್ನೇ ಮಗ ಹತ್ಯೆಗೈದಿದ್ದಾನೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕ್ಕಾಗಿ ಶಿವಾನಂದ ಕೋಟ್ಯಾಳ ಹತ್ಯೆ ಮಾಡಿದ್ದರು. ಇನ್ನೂ ಮಗ ಮುತ್ತುರಾಜ ಕೊಟ್ಯಾಳ್, ಮಹಾದೇವಿ ಕೋಟ್ಯಾಳ, ಶ್ರೀಧರ್ ಹುಲೆಪ್ಪಗೋಳ ಬಂಧನ ಮಾಡಲಾಗಿದೆ. ಅಲ್ಲದೇ, ಹಣಕ್ಕಾಗಿ ಪದೇ ಪದೇ ತಂದೆ ಮಗನ ಮಧ್ಯೆ ಗಲಾಟೆ ಆಗುತ್ತಿತ್ತು. ಈ ಹಿನ್ನೆಲೆ ಮಲಗಿದ ವೇಳೆ ತಂದೆ ಶಿವಾನಂದನ್ನು ತಲೆದಿಂಬುವಿಂದ ಉಸಿರು ಗಟ್ಟಿಸಿ ಹತ್ಯೆ ಮಾಡಿದರು. ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.