ವಿಜಯಪುರ: ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ಮಾಡುವುದು ಶಿಕಾರ್ಹ ಅಪರಾಧವಾಗಿದ್ದು, ಭ್ರೂಣ ಲಿಂಗ ಪತ್ತೆ ಮಾಡುವುದಾಗಲಿ, ಭ್ರೂಣ ಲಿಂಗ ಪತ್ತೆಗೆ ಪ್ರಚೋದನೆ ಮಾಡುವುದು ಅಪರಾಧವಾಗಿದ್ದು, ಲಿಂಗಾನುಪಾತದ ಸಮಾನತೆ ಕಾಪಾಡಲು ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಕರ್ಪ ಇಲಾಖೆ, ಪಿಸಿ/ಪಿಎನ್ಡಿಟಿ ಕೋಶ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪಿಸಿ/ಪಿಎನ್ಡಿಟಿ ಕೋಶ ಭೇಟಿ ಬಚಾವೂ, ಬೇಟಿ ಪಡಾವೋ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗಂಡು ಹೆಣ್ಣಿನ ಅನುಪಾತದಲ್ಲಿ ತೀವ್ರವಾದ ಅಂತರ ಉಂಟಾದರೆ ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯಂತಹ ಘಟನೆಗಳು ನಡೆಯದಂತೆ ಜಾಗೃತೆ ವಹಿಸಬೇಕು. ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ‘ಬೇಟಿ ಬಚಾವೋ ಬೇಟೊ ಪಡಾವೋ’ ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ರಕ್ಷಣೆಗೆ ಆದ್ಯತೆ ನೀಡಿದೆ. ಗಂಡು ಮಕ್ಕಳ ಬೆಳವಣಿಗೆಗೆ ಸಮಾನವಾಗಿ ಹೆಣ್ಣು ಮಗುವನ್ನು ಬೆಳೆಸಬೇಕು. ಸ್ಥಳೀಯ ಮಟ್ಟದ ಸಂಘ-ಸಂಸ್ಥೆಗಳ ಸಹಾಯದೊಂದಿಗೆ ಕಾರ್ಯಗತಗೊಳಿಸಿ, ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕು. ಪುರುಷ-ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಠಿಯಿಂದ ಕೇಂದ್ರ ಸರ್ಕಾರ ಹೆರಿಗೆಗೆ ಮುನ್ನ ಭ್ರೂಣ ಲಿಂಗ ಪತ್ತೆ ಮಾಡುವ ಕಾಯ್ದೆ-1994 ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು. ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯಿಂದ ಮಹಿಳೆಯರ ಸಂಖ್ಯೆ ಕಡಿಮೆಯಾಗಿ ಕುಟುಂಬದ ವ್ಯವಸ್ಥೆ ಹದಗೆಡುತ್ತದೆ. ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ. ಹಲವು ಸಮಸ್ಯೆಗಳು ಉಂಟಾಗುತ್ತವೆ ಇದನ್ನು ತಡೆಗಟ್ಟುವಲ್ಲಿ ಸಮಾಜ ಜಾಗೃತಿ ಹೊಂದುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸಲಹಾ ಸಮಿತಿ ಸದಸ್ಯ ಪೀಟರ್ ಅಲೆಕ್ಸಾಂಡರ್ ಅವರು ಹೇಳಿದರು. ಭ್ರ್ರೂಣ ಲಿಂಗ ಪತ್ತೆ ಮಾಡುವುದರಿಂದ ಸಮಾಜದ ಮೇಲೆ ಆಗುವ ದುಷ್ಟಪರಿಣಾಮಗಳು, ಕಾನೂನ ಕ್ರಮಗಳು, ವೈದ್ಯಕೀಯ ಗರ್ಭಪಾತ ಮಾಡುವಾಗ ಅನುಸರಿಬೇಕಾದ ಕ್ರಮಗಳು ಮತ್ತು ದಾಖಲಾತಿಗಳ ನಿರ್ವಹಣೆ ಬಗ್ಗೆ ಡಾ. ಇಂದುಮತಿ ಪಾಟೀಲ (ಟಿ.ಓ.ಟಿ) ಬೆಂಗಳೂರು ಪಿಸಿ / ಪಿಎನ್ಡಿಟಿ ಅÀವರು ವಿವರವಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಯರಗಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಉಪ ನಿರ್ದೇಶಕರಾದ ಡಾ|| ಚನ್ನಮ್ಮಾ ಕಟ್ಟಿ, ಜಿಲ್ಲಾ ಕು.ಟುಂಬ Pಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಪಿಸಿ/ಪಿಎನ್ಡಿಟಿ ಕೋಶದ ಕಾನೂನು ಸಲಹೆಗಾರ ತುಳಸಿರಾಮ ಸೂರ್ಯವಂಶಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶ್ರೀಮತಿ ಗೀತಾ ಗುತ್ತರಗಿಮಠ, ಡಾ. ಟಿ ಪಿ ನಾಯ್ಡೋ, ಅಲ್-ಅಮೀನ ಮೆಡಿಕಲ್ ಕಾಲೇಜ ಹೆಚ್.ಓ.ಡಿ ಡಾ.ವಿದ್ಯಾ ತೊಬ್ಬಿ, ಡಾ. ಪರಶುರಾಮ ದೇವಮಾನೆ, ಬಿ.ಎಲ್.ಡಿ.ಇ ಸಂಸ್ಥೆಯ ಹೆಚ್.ಓ.ಡಿ, ಡಾ. ಮುದ್ನೂರ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್ ಆರ್ ಬಾಗವಾನ, ಜಿಲ್ಲಾ ಎನ್ವಿಬಿಸಿಡಿಪಿ ಅಧಿಕಾರಿಗಳಾದ ಜೈಬುನಿಸಾ ಬೀಳಗಿ, ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ. ಕವಿತಾ ದೊಡಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ ಎಮ್ ಕೋಲೂರ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಪರಶುರಾಮ ಹಿಟ್ನಳ್ಳಿ, ಶ್ರೀ ವಿಜಯ ಮಹಾಂತೇಶ ಹಗರಬಾಳ ಹಾಗೂ ಜಿಲ್ಲೆಯ ವೈದ್ಯರು, ಸ್ತ್ರೀರೋಗ ತಜ್ಞರು ಹಾಗೂ ರೇಡಿಯೋಲಾಜಿಸ್ಟ್ ಅವರು ಉಪಸ್ಥಿತರಿದ್ದರು.