ವಿಜಯಪುರ: ವಕ್ಫ್ ಬೋರ್ಡ್ಗೆ ಸಂಬಂಧಿಸಿದ ಜಾಗೆ ಎಂದು ಭಾವಿಸಿ ವ್ಯಕ್ತಿಯೊಬ್ಬರ ಜಮೀನು ಅಗೆದು ಅದರಲ್ಲಿ ಶವ ಸಂಸ್ಕಾರ ಮಾಡಿರುವ ಘಟನೆ ವಿಜಯಪುರ ನಗರ ಹೊರವಲಯದಲ್ಲಿ ನಡೆದಿದೆ. ಜಮೀನಿನಲ್ಲಿದ್ದ ನೀರಿನ ಪೈಪ್, ಒಳಚರಂಡಿ ಪೈಪ್ ಹಾಗೂ ಚೆಂಬರ್ ಒಡೆದು 9.23 ಲಕ್ಷ ಹಾನಿ ಮಾಡಿದ್ದಾರೆ ಎಂದು ಜಮೀರಅಹ್ಮದ ಬಸೀರಅಹ್ಮದ ಬಾಗಲಕೋಟ ದೂರು ನೀಡಿದ್ದಾರೆ. ಅ್ಜಲ್ಪುರ ಟಕ್ಕೆಯ ಸೈಯ್ಯದ್ಹುಸೇನಪೀರ ಜಾಗೀರದಾರ ಹಾಗೂ ಇತರೇ 13 ಜನ ಲಕ್ಷಾಂತರ ಹಾನಿ ಮಾಡಿದ ಆರೋಪಿಗಳು. ಜಮೀರ್ಅಹ್ಮದ್ ಅವರ ಮಹಾಲಬಾಗಾಯತ್ ಜಮೀನ ಸರ್ವೇ ನಂಬರ್ 804/*/2ನೇದ್ದು ವಕ್ಫ್ ಬೋರ್ಡ್ಗೆ ಸಂಬಂಧಿಸಿದೆ ಎಂದು ಆರೋಪಿಗಳು ಜೆಸಿಬಿ ಮೂಲಕ ಜಮೀನು ಅಗೆದು ಶವ ಸಂಸ್ಕಾರ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಲಂ: 143,147,447,427,506 ರೆ/ವು 149 ಐಪಿಸಿನಡಿ ದೂರು ದಾಖಲಾಗಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.