ವಿಜಯನಗರ: ಬೆಕ್ಕು ಕೊಂದ ಮೂವರ ವಿರುದ್ಧ FIR ದಾಖಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಎಂಪಿ ಪ್ರಕಾಶ್ ನಗರದಲ್ಲಿ ನಡೆದಿದೆ. ಮನೆಯಲ್ಲಿ ಸಾಕಿದ್ದ ಬೆಕ್ಕು ಕೊಂದ ಆರೋಪದಡಿ ಮೂವರ ವಿರುದ್ಧ ದೂರು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ
ಆರೋಪಿಗಳು ಏ.14 ರಂದು ಬೆಳಗ್ಗೆ ಎಂ.ಪಿ.ಪ್ರಕಾಶ ನಗರದ ಎಂ.ಎಂ.ಹುಸೇನ್ ಎಂಬವರ ಮನೆಯ ಬಳಿ ಘಟನೆ ಆಗಿದೆ. ದ್ವಿಚಕ್ರ ವಾಹನದಲ್ಲಿ ಬಂದು ಬಲೆ ಹಾಕಿ 5 ವರ್ಷದ ಬೆಕ್ಕನ್ನು ಸೆರೆಹಿಡಿದ ಬೆಕ್ಕನ್ನು ನೆಲಕ್ಕೆ ಒಡೆದು ಕೊಂದು ಚೀಲದಲ್ಲಿ ಹಾಕಿಕೊಂಡು ಹೋಗಿದ್ದಾರೆ.
ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದಕ್ಕಾಗಿ ಮನೆಯ ಮಾಲಿಕ ಎಂ.ಎಂ.ಹುಸೇನ್
ನೀಡಿದ ದೂರಿನ ಆಧಾರದ ಸೀನು, ಪ್ರದೀಪ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.