ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದಾಗಿ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಕಬ್ಬು ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ
ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆದಿದೆ. ಬಸಲಿಂಗಮ್ಮ ಬಿರಾದಾರ ಎಂಬುವರ 3.6 ಎಕರೆ ಕಬ್ಬಿಗೆ ಬೆಂಕಿ ತಗುಲಿ ಅಂದಾಜು 12 ಲಕ್ಷ ಹಾನಿಯಾಗಿದೆ. 2.30 ಎಕರೆ ಕಬ್ಬು, 20ಕ್ಕೂ ಹೆಚ್ಚು ಟೆಂಗಿನ ಮರ, 5 ಮಾವು, 5 ಚಿಕ್ಕು, ಸೀತಾಫಲ ಗಿಡಗಳು, 100 ಅಡಿಗೂ ಹೆಚ್ಚು ಕೇಬಲ್, 10ಕ್ಕೂ ಹೆಚ್ಚು ಪಿವಿಸಿ ಪೈಪು, 10 ಕಾರಂಜಿ ಬೆಂಕಿಗಾಹುತಿಯಾಗಿವೆ. ಈ ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)