ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದ ಬಳಿ ಅಗ್ನಿ ಅವಘಡ ನಡೆದಿದೆ.
ಬಾಂಡ್ ರೈಟರ್ಸ್ ಅಂಗಡಿಗಳು ಬೆಂಕಿಗಾಹುತಿ ಆಗಿವೆ. ಅಂಗಡಿಯೊಂದರಲ್ಲಿ ಯುಗಾದಿ ಅಮಾವಾಸ್ಯೆ ಪೂಜೆಗೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ಹೊತ್ತಿರೋ ಸಂಶಯ ವ್ಯಕ್ತವಾಗಿದೆ. ಬಾಂಡ್ ರೈಟರ್ಸ್ ಗಳಾದ
ಎಂ ಪಿ ಕನ್ನೂರ್, ಆರ್ ಎಸ್ ಸಂಕೀನ್, ಪಿ ಎಸ್ ಹಿರೇಮಠ, ಶಿವಾನಂದ ಪೊಲೇಶಿ ಎಂಬವವರಿಗೆ ಸೇರಿದ ಅಂಗಡಿಗಳಲ್ಲಿದ್ದ ಸಾಮಗ್ರಿಗಳು ಬೆಂಕಿಗಾಹುತಿ ಆಗಿವೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ.