ವಿಜಯಪುರ: ಗೋಡೌನ್ನಲ್ಲಿ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ನಿಂದ ಸಂಗ್ರಹಿಸಿ ಇಟ್ಟಿದ್ದ ಹತ್ತಿ ಭಸ್ಮವಾಗಿರುವ ಘಟನೆ ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ ಗೋಡೌನ್ನಲ್ಲಿ ನಡೆದಿದೆ. ಶ್ರೀಲಕ್ಷ್ಮೀ ಕಾಟನ್ ಇಂಡಸ್ಟ್ರಿಯಲ್ ಎಂಬುವರ ಗೋಡೌನ್ನಲ್ಲಿ ಅವಘಡ ಸಂಭವಿಸಿದೆ. ಅಲ್ಲದೇ, ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸಿದರು. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.