ಚಿತ್ರದುರ್ಗ: ಗೋಡೌನನಲ್ಲಿ ಇಟ್ಟಿದ್ದ ಬೆಳ್ಳುಳ್ಳಿಯನ್ನು ಚಾಲಾಕಿ ಕಳ್ಳರ ಕೈಚಳಕ ತೋರಿಸಿ 6 ಲಕ್ಷ(Lakh) ಮೌಲ್ಯದ ಬೆಳ್ಳುಳ್ಳಿ(Garlic) ಕಳ್ಳತನಗೈದು ಪರಾರಿಯಾಗಿರುವ ಘಟನೆ ಚಿತ್ರದುರ್ಗ ಸಮೀಪದ ದಂಡಿನ ಕುರುಬರಹಟ್ಟಿ ಬಳಿ ನಡೆದಿದೆ. ಜಯಶೀಲರೆಡ್ಡಿ ಎಂಬುವವರ ಗೋಡೌನ್ನಲ್ಲಿ ಸ್ಟಾಕ್ ಇಟ್ಟಿದ್ದ ಬೆಳ್ಳುಳ್ಳಿ ಕಳ್ಳತನ ಆಗಿದೆ. 1100 ಬೆಳ್ಳುಳ್ಳಿ ಚೀಲಗಳ ಪೈಕಿ 150 ಚೀಲ ಬೆಳ್ಳುಳ್ಳಿ ಕಳವು ಆಗಿದ್ದಾವೆ. ರೂಲಿಂಗ್ ಶೆಟ್ಟರ್ ಮುರಿದು ಕಳ್ಳತನ ಮಾಡಿದ್ದಾರೆ. ಗೋಡೌನ್ನಲ್ಲಿ ರಾತ್ರಿ ಯಾರು ಇಲ್ಲದ ವೇಳೆ ಕಳ್ಳತನ ಆಗಿದೆ. ಸ್ಥಳಕ್ಕೆ ಚಿತ್ರದುರ್ಗದ ಗ್ರಾಮಾಂತರ ಠಾಣೆ ಪೊಲೀಸರು(Police) ಭೇಟಿ, ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.