ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಬಡಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸಂಗಪ್ಪ ಹೂಗಾರ (28) ಹತ್ಯೆಯಾಗಿರುವ ದುರ್ದೈವಿ. ಪರಸಪ್ಪ ಕೊಲಕಾರ, ಬಸಪ್ಪ ಕೊಲಕಾರ, ಮಲ್ಲಪ್ಪ ಕೊಲಕಾರ, ಪ್ರಭು ಕೊಲಕಾರ, ಲೋಹಿತ ಕೊಲಕಾರ, ಗೋಪಿ ಕೊಲಕಾರ, ಪ್ರಭು ನಾಟಿಕಾರ್, ಬಸಪ್ಪ ವಾಲೀಕಾರ್ ವಿರುದ್ಧ ಕೇಅ್ ದಾಖಲಾಗಿದೆ.
*ಘಟನೆ ವಿವರ*
ಹತ್ಯೆಯಾಗಿರುವ ಸಂಗಪ್ಪ ಹಾಗೂ ಪಕ್ಕದ ಮನೆಯ ಭಾಗ್ಯಶ್ರೀ ಮನೆಯಲ್ಲಿದ್ದ ವೇಳೆ ಆರೋಪಿಗಳು ಏಕಾಏಕಿ ಮನೆಗೆ ನುಗ್ಗಿ ಸಂಗಪ್ಪನ ಮೇಲೆ ಬಡಿಗೆಯಿಂದ ಹಲ್ಲೆಗೈದಿದ್ದಾರೆ. ಇದರಿಂದ ಗಂಭೀರವಾಗಿ ಸಂಗಪ್ಪ ಗಾಯಗೊಂಡಿದ್ದ. ತದನಂತರ ಪಂಚಾಯತಿ ಮಾಡಲು ಊರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಸಂಗಪ್ಪ ಅಸುನೀಗಿದ್ದಾನೆ. ಈ ಕುರಿತು ಮನಗೂಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.