ವಿಜಯಪುರ: ವಿಧಾನಸಭಾ ಚುನಾವಣೆ ಬಿಸಿಲೂರಿನ ಬಿಸಿಲಿನಂತೆ ಧಗೆ ಧಗೆ ಉರಿಯುತ್ತಿದೆ. ಕೈ, ಕಮಲ ಮಧ್ಯದ ಫೈಟ್ ಆರಂಭವಾಗಿದೆ. ಇದರ ಮಧ್ಯೆ ನಿನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಕ್ಯಾಮೆರಾಗಳ ಮೊಬೈಲ್ನಲ್ಲಿದ್ದ ವಿಡಿಯೋಗಳನ್ನು ಡಿಲಿಟ್ ಮಾಡಿಸಿದ್ದಾರೆ. ಹೌದು..! ಆ ಮುಖಂಡರೊಬ್ಬರು ನಿನ್ನೆ ಮಾಡಿದ ಭಾಷಣದಿಂದ ಕೈ ನಾಯಕರಿಗೆ ಮುಜುಗರ ಆಗಿದೆ. ಅಲ್ಲದೇ, ನಾನು ಶಾಸಕನಾದ್ರೇ ಆ ಸಮಾಜದವನ್ನೇ ಬದಲಾವಣೆ ಮಾಡುತ್ತೇನೆ. ಅಲ್ಲಿ ಆ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಸ್ಥಳೀಯರ ವರದಿಗಾರರು, ಕ್ಯಾಮೆರಾಗಳ ರೆಕಾರ್ಡ್ ಮಾಡಿದ್ದಾರೆ. ತಕ್ಷಣವೇ ಅಕ್ಕ ಪಕ್ಕದ ಮುಖಂಡರು ಎಚ್ಚೆತ್ತುಕೊಂಡು ಕ್ಯಾಮೆರಾಗಳ ಮೊಬೈಲ್ನಲ್ಲಿದ ವಿಡಿಯೋ ಡಿಲಿಟ್ ಮಾಡಿಸಿದ್ದಾರೆ. ಕಳೆದ ರಾತ್ರಿ ಕೈ ನಾಯಕರು, ಕೈ ಕಾರ್ಯಕರ್ತರ ಇಡೀ ರಾತ್ರಿ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಂದಿನ ಭಾಗದಲ್ಲಿ ಆ ವಿಡಿಯೋ ಸಮೇತ ಸುದ್ದಿ ನಿಮ್ಮ ಮುಂದೇ ಬರುತ್ತದೆ. ಆ ವಿಡಿಯೋ ರಿಲೀಸ್ ಪಕ್ಕಾ.. ಆ ವಿಡಿಯೋ ಮೇಲೆ ಚುನಾವಣೆ ಎನ್ನುವುದು 100% ಆಗುತ್ತದೆ…