ವಿಜಯಪುರ: ದ್ರಾಕ್ಷಿ ಜಮೀನಿನಲ್ಲಿ ದಾರಿಯ ಸಲುವಾಗಿ ಓರ್ವನ್ನು ಕೊಲೆಗೈದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ಪಟ್ಟಣದಲ್ಲಿ ನಡೆದಿದೆ.
ಮಹಾಂತೇಶ ಕುಂಬಾರ, ಪರಶುರಾಮ ಕುಂಬಾರ, ರವಿ ಕುಂಬಾರ, ಶ್ರೀರಕ್ಷ ಚವ್ಹಾಣ ಬಂಧಿತ ಆರೋಪಿಗಳು. ಇನ್ನು ಅಶೋಕ ಕುಂಬಾರನ್ನು ಕಾಮನಕೇರಿ ಗ್ರಾಮದಲ್ಲಿ ಬಡಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.
ಇದೀಗ್ ಬಂಧಿತರಿಂದ ಕೃತ್ಯಕ್ಕೆ ಬಳಿಸಿದ ಬಡಿಗೆ, ಕಾರು, ಬೈಕ್, ಮೊಬೈಲ್ಗಳನ್ನು ಜಪ್ತಿಗೈದಿದ್ದಾರೆ.
ಈ ಕುರಿತು ಬಸವನಬಾಗೇಬಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.