ವಿಜಯಪುರ: ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡದೆ, ಚುನಾವಣಾ ಕರ್ತವ್ಯ ನಿರ್ವಹಿಸುವಲ್ಲಿ ನಿಷ್ಕಾಳಜಿತನ ತೋರಿ, ಕರ್ತವ್ಯ ಲೋಪ ಎಸಗಿರುವ ಮುದ್ದೇಬಿಹಾಳದ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವನಿಂಗಪ್ಪ ಕುಂಬಾರ, ಮುದ್ದೆಬಿಹಾಳ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಸಂಜೀವ ಲಮಾಣಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಿರಿಯ ಅಭಿಯಂತರ ವಿಜಯಕುಮಾರ ನಾಯಕ, ಕೋಳೂರಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗರಾಜ್ ಬಿ ಆರ್ ಇವರ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ, ಕರ್ನಾಟಕ ನಾಗರೀಕ ಸೇವಾ ನಿಯಮ 1957ರ ನಿಯಮ 10 (1)(ಡಿ) ರನ್ವಯ ಹಾಗೂ ಜನತಾ ಪ್ರಾತಿನಿಧ್ಯ ಅಧಿನಿಯಮ 1950ರ ಕಲಂ 32ರಂತೆ ಇವರನ್ನು ಸೇವೆಯಿಂದ ಅಮಾನತುಗೊಳಿಸಿ, ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರು ಆದೇಶಿಸಿದ್ದಾರೆ.
ಅಮಾನತ್ತುಗೊಂಡಿರುವ ಇವರು ಈ ಅವಧಿಯಲ್ಲಿ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ಕರ್ನಾಟಕ ನಾಗರೀಕ ಸೇವಾ ನಿಯಮ 98 ರನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚುನಾವಣಾ ಕರ್ತವ್ಯ ಲೋಪ ನಾಲ್ವರು ಅಮಾನತು
![ಚುನಾವಣಾ ಕರ್ತವ್ಯ ಲೋಪ ನಾಲ್ವರು ಅಮಾನತು ಚುನಾವಣಾ ಕರ್ತವ್ಯ ಲೋಪ ನಾಲ್ವರು ಅಮಾನತು](https://karnataka1news.com/wp-content/uploads/2023/04/suspended-860x800.jpg)