ವಿಜಯಪುರ: ಸರ್ಕಾರಿ ಶಾಲೆಯಲ್ಲಿ 1ರಿಂದ 12ನೇ ತರಗತಿಗೆ ಪ್ರಸಕ್ತ ಸಾಲಿನಲ್ಲಿ ದಾಖಲಾಗಿರುವ ದೃಷ್ಟಿದೋಷ (ಮಂದದೃಷ್ಟಿ), ಶ್ರವಣದೋಷ ಮತ್ತು ಲೋಕೋಮೋಟರ್(ಚಲನ ದೋಷ) ನ್ಯೂನ್ಯತೆ ಹೊಂದಿರುವ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಿ,ಉಚಿತವಾಗಿ ಅಗತ್ಯ ಸಾಧನ-ಸಲಕರಣೆಗಳನ್ನು ಒದಗಿಸುವುದಕ್ಕಾಗಿ “ತಾಲೂಕಾ ಮಟ್ಟದ ವೈದ್ಯಕೀಯ ಮೌಲ್ಯಾಂಕನ ಶಿಬಿರ”ವನ್ನು ಜ.12ರ ಬೆಳಿಗ್ಗೆ. 9:30ಕ್ಕೆ ಚಡಚಣ (ಮರಡಿ) ಸಮುದಾಯ ಆರೋಗ್ಯ ಕೆಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಗುವಿನ/ಪೋಷಕರ ಆಧಾರ ಕಾರ್ಡ್, ಎರಡು ಭಾವಚಿತ್ರ, ಆದಾಯ ಪ್ರಮಾಣ ಪತ್ರ /ಬಿಪಿಎಲ್, ಎ.ಪಿ.ಎಲ್ ಕಾರ್ಡ, ಶೇ.40% ಮೇಲ್ಪಟ್ಟ ನ್ಯೂನ್ಯತೆ ಇರುವ ಬಗ್ಗೆ ಮಗುವಿನ ಯುಡಿಐಡಿ ಕಾರ್ಡ್, ಮಗುವಿನ ಮತ್ತು ಪಾಲಕರ ಬ್ಯಾಂಕ್ ಪಾಸ್ಬುಕ್ನ ಝರಾಕ್ಸ್ ಪ್ರತಿ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಶಿಬಿರಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಸ್.ಎಸ್. ಬೋರ್ಗಿ ಮೊಬೈಲ್ ಸಂಖ್ಯೆ: 7090560236, ರಾಜಕುಮಾರ ಪಿ. ಗುರವ ಮೊಬೈಲ್ ಸಂಖ್ಯೆ -9964858524 ಸಂಪರ್ಕಿಸಬಹುದಾಗಿದೆ ಎಂದು ಚಡಚಣದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.