ವಿಜಯಪುರ: ಒಂದು ಮೊಬೈಲ್ ಕರೆಯಿಂದಾಗಿ ಕಿಡ್ನ್ಯಾಪ್ ಪ್ರಕರಣ ಭೇದಿಸಲಾಗಿದೆ ಎಂದು ಎಸ್ಪಿ ಎಚ್ ಡಿ ಆನಂದಕುಮಾರ ಮಾಹಿತಿ ನೀಡಿದರು.
ಲಕ್ಷ್ಮಿ ಸೊನ್ನದನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆಯಿಟ್ಟದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.
ಸಾಗರ ಜುಮ್ಮನಗೋಳ, ಶಿವಾಜಿ ಉಪ್ಪಾರ, ಆಕಾಶ ವೀರಕರ, ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು. ಲಕ್ಷ್ಮಿನ್ನು ಕಿಡ್ನ್ಯಾಪ್ಗೈದು ಹತ್ಯೆಗೆ ಸುಪಾರಿ ನೀಡಿದ ವ್ಯಕ್ತಿ ಹಣ ನೀಡಿಲ್ಲ. ಅದಕ್ಕಾಗಿ ಲಕ್ಷ್ಮಿ ಬಳಿ ಕಿಡ್ನ್ಯಾಪ್ ಮಾಡಿದವರು 5 ಲಕ್ಷ ಹಣ ಕೇಳಿದ್ದಾರೆ. ಅದಕ್ಕಾಗಿ ನನಗೆ ಕಾಲ್ ಮಾಡಲು ಅನುಮತಿ ನೀಡಿ ಎಂದು ಲಕ್ಷ್ಮಿ ಹೇಳಿದ್ದಾಳೆ.
ಇದರಿಂದ ಮನೆಗೆ ಕಾಲ್ ಮಾಡಿ ಹಣಕ್ಕೆ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ. ಇದರಿಂದ ಆರೋಪಿಗಳು ಅಂದರ್ ಆಗಿದ್ದು, ಅದಕ್ಕಾಗಿ ಪ್ರಕರಣ ಭೇದಿಸಲಾಗಿದೆ ಎಂದರು.