ವಿಜಯಪುರ: ದುಶ್ಚಟಕ್ಕೆ ಬಲಿಯಾಗುತ್ತಿರುವ ಇಂದಿನ ಯುವ ಸಮೂಹವನ್ನು ಎಚ್ಚರಿಸಲು ಗಾನ ಯೋಗಿ ಸಂಘದ ಪದಾಧಿಕಾರಿಗಳು ದುಶ್ಚಟಕ್ಕೆ ಬಲಿಯಾಗದಿರಿ.. ಬಲಿಯಾಗಿ ತಮ್ಮ ಪ್ರಾಣ ಕಳೆದುಕೊಂಡು ತಮ್ಮ ತಂದೆತಾಯಿಯರನ್ನು ಅನಾಥರನ್ನಾಗಿಸದಿರಿ ಎನ್ನುವ ಸಂದೇಶವನ್ನು ಸಾರುವ ಮೂಲಕ ವಿಜಯಪುರ ನಗರ ಬಸ್ ಸಾರಿಗೆ ಸಂಸ್ಥೆಯ ಶೌಚಾಲಯದ ಗೋಡೆಯ ಮೇಲೆ ಯುವಕರ ಮೇಲೆ ಪ್ರಭಾವ ಬೀರುವ ಬರಹಗಳನ್ನು ಸುಣ್ಣ ಬಣ್ಣಗಳನ್ನು ಬಳೆಯುವ ಮೂಲಕ ಜಾಗೃತಿಯನ್ನು ವಿನೂತನವಾಗಿ ಮೂಡಿಸಿದರು. ಈ ಸಂದರ್ಭದಲ್ಲಿ ಪ್ರಕಾಶ ಆರ್.ಕೆ. ಮಾತನಾಡಿ, ಇಂದಿನ ಯುಕವರು ಗಾಂಜಾ, ಗುಟ್ಕಾ, ಡ್ರಗ್ಸ್, ಅಪೀಮು ಸೇರಿದಂತೆ ಇನ್ನಿತರ ದುಶ್ಟಟಗಳಿಗೆ ದಾಸರಾಗುತ್ತಿರುವುದು ಶೋಚನೀಯ ಸಂಗತಿ. ಕಾಲೇಜು ಕಲಿಯುವ ಸಣ್ಣ ವಯಸ್ಸಿನಲ್ಲಿ ಶೋಕಿಗಾಗಿ ಕುಡಿತದ ಚಟಕ್ಕೆ ಬಿದ್ದು ಅದನ್ನೇ ಬದುಕಿನಲ್ಲಿ ರೂಢಿಯಾಗಿಸಿಕೊಂಡು ಮದ್ಯ ಅಪೀಮು, ಅಮಲೀನ ದಾಸರಾಗಿ ತಮ್ಮ ಬದುಕನ್ನೆ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರು ಹೊರ ಬರಬೇಕು. ಮಹಾಮಾರಿ ದುಶ್ಟ್ಟ್ಚಟಗಳನ್ನು ಹಿಮ್ಮೆಟ್ಟಿಸಲು ಯುವಕರು ಮುಂದೆ ಬರಬೇಕು. ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಇದು ಕೇವಲ ಒಬ್ಬರಿಂದ ತಡೆಯಲು ಸಾಧ್ಯವಾಗದು ಪ್ರತಿಯೊಬ್ಬರು ಕೈ ಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಬಾಹುಬಲಿ ಶಿವಣ್ಣನವರ, ರಾಜಕುಮಾರ ಹೊಸಟ್ಟಿ, ವಿರೇಶ ಸೊನ್ನಲಗಿ, ಸಚಿನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ಸಚಿನ ಚವ್ಹಾಣ, ಬಾಬು, ರೇವಣಸಿದ್ಧಯ್ಯ, ತನುಜ, ಸಂದೀಪ, ಆಕಾಶ, ಶ್ರೀನಾಥ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಗಾನ “ಯೋಗಿ” ಸಂದೇಶ ರವಾನೆ
![](https://karnataka1news.com/wp-content/uploads/2023/09/Ganyogi-860x430.jpg)