ವಿಜಯಪುರ: ಪರವಾನಗಿಯಿಲ್ಲದೇ ಗಾಂಜಾ ಸಾಗಣೆ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ನಡೆದಿದೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಸವರಾಜ ವಿಠ್ಠಲ ಅಚ್ಚೆಗಾಂವ, ಅಂಜುಟಗಿ ಗ್ರಾಮದ ಭೀಮಶಿ ಮಾರುತಿ ಹೊನಗೊಂಡ, ಐಹಿರಸಂಗ ಗ್ರಾಮದ ಹೊನ್ನಪ್ಪ ಮುತ್ತಪ್ಪ ಕಾಡೆಗೋಳ, ವಿಜಯಪುರ ಶ್ರೀನಗರ ಕಾಲೊನಿಯ ಸಚಿನ್ ಶರಣಪ್ಪ ಕುಂಬಾರ ಹಾಗೂ ಮಹಿಬೂಬ ನಗರ ನಿವಾಸಿ ತೌಫೀಕ್ ಸೈಯ್ಯದ ಡಾಲಾಯತ ಬಂಧಿತ ಆರೋಪಿಗಳು.
ತಮ್ಮ ಲಾಭಕ್ಕೋಸ್ಕರ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಎಲೆ, ಹೂವು, ಬೀಜ ಮಿಶ್ರಿತ 2 ಕೆಜಿಗೂ ಹೆಚ್ಚಿದ ಒಣಗಿದ ಗಾಂಜಾ ಸೇರಿದಂತೆ ಜೊತೆಗೆ ಎರಡು ಬೈಕ್ ಹಾಗೂ ಸ್ಮಾರ್ಟ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.