ವಿಜಯಪುರ: ಬಾಸಿಂಗ್ ಬಿಡಲು ನದಿಗೆ ಇಳಿದ ಬಾಲಕ ಆಕಸ್ಮಿಕ ಕಾಲು ಜಾರಿ ನೀರು ಪಾಲಾದ ಘಟನೆ ನಿಡಗುಂದಿ ತಾಲೂಕಿನ ಯಲಗೂರು ಕೃಷ್ಣಾ ನದಿ ತೀರದಲ್ಲಿ ಸೋಮವಾರ ನಡೆದಿದೆ. ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದ ವೆಂಕಟೇಶ ಶರಣಪ್ಪ ಚಲವಾದಿ(೧೬) ಮೃತ ದುರ್ದೈವಿ. ಶುಕ್ರವಾರ ಮೃತನ ಚಿಕ್ಕಪ್ಪ ರವಿ ಅವರ ಮದುವೆ ನಡೆದಿದ್ದು ಸಂಪ್ರದಾಯದಂತೆ ನದಿಗೆ ಬಾಸಿಂಗ್ ಬಿಡಲು ಬಂಧುಗಳೊಂದಿಗೆ ವೆಂಕಟೇಶ ಬಂದಾಗ ಈ ದುರ್ಘಟನೆ ನಡೆದಿದೆ. ಬಸವನಬಾಗೇವಾಡಿಯ ಅಗ್ನಿಶಾಮಕ ದಳ ಸಿಬ್ಬಂದಿ ಶವದ ಹುಡುಕಾಟ ನಡೆಸಿದ್ದಾರೆ.