ವಿಜಯಪುರ: ಜನಸೇವೆ ಮಾಡುವ ಏಕೈಕ ಉದ್ದೇಶದಿಂದ ಪೊಲೀಸ್ ನೀರಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ್ದು, ನಾಗಠಾಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಯುವ ಧುರೀಣ ಮಹೇಂದ್ರ ನಾಯಕ ತಿಳಿಸಿದರು. ವಿಜಯಪುರದಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿಯೂ ಬಿಜೆಪಿ ಟಿಕೆಟ್ ಪಡೆದುಕೊಳ್ಳಲು ಇಚ್ಚಿಸಿದ್ದೆ, ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗಲಿಲ್ಲ, ಈಗ ಟಿಕೆಟ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಈಗಾಗಲೇ ರಾಜೀನಾಮೆ ನೀಡಿದ್ದು, ರಾಜೀನಮೆ ಸಹ ಅಂಗೀಕೃತವಾಗಿದೆ ಎಂದರು.
ಈಗಾಗಲೇ ಪಕ್ಷದ ಹೈಕಮಾಂಡ್ ಭೇಟಿ ಮಾಡಿದ್ದು, ಟಿಕೆಟ್ ಸಿಗುವ ವಿಶ್ವಾಸವಿದೆ, ಜನಸೇವೆ ಮಾಡಲು ರಾಜಕೀಯ ಕ್ಷೇತ್ರದಿಂದ ಇನ್ನಷ್ಟೂ ವಿಸ್ತಾರವಾಗಿ ಸೇವೆ ಮಾಡಲು ಸಾಧ್ಯ ಎನ್ನುವ ಕಾರಣದಿಂದ ರಾಜಕೀಯ ಪ್ರವೇಶಿಸಿರುವೆ ಎಂದರು. ಪೊಲೀಸ ಇಲಾಖೆ ನನಗೆ ಸಾಕಷ್ಟು ಗೌರವವನ್ನು ತಂದು ಕೊಟ್ಟಿದೆ ಅಲ್ಲಿನ ಯಾವುದೆ ಸಮಸ್ಯೆಯಿಂದ ಅಥವಾ ಇನ್ನಾವುದೋ ಕಾರಣದಿಂದ ನಾನು ರಾಜೀನಾಮೆ ನೀಡಿಲ್ಲ. ಆದರೆ ರಾಜಕೀಯ ವ್ಯವಸ್ಥೆಯಲ್ಲಿದ್ದು ಒಬ್ಬ ಜನಪ್ರತಿನಿಧಿಯಾಗಿ ಜನಸೇವೆ ಮಾಡುವುದಕ್ಕಾಗಿ ಮತ್ತು ಇಲಾಖೆಯಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಬಹಳಷ್ಟು ವ್ಯತ್ಯಾಸ ಇರುವುದರಿಂದ ಮತ್ತೆ ನಾನು ಇಲಾಖೆಯಲ್ಲಿ ಇದ್ದಾಗ ಕಂಡಂತ ಜನರ ಸಮಸ್ಯೆಗಳ ನಿವಾರಣೆ ಸಂಕಲ್ಪ ಮಾಡಿರುವೆ ಎಂದರು. ಮೀಸಲು ಮತಕ್ಷೇತ್ರಕ್ಕೆ ಭಾಜಪದ ಪ್ರಭಲ ಆಕಾಂಕ್ಷಿ ಆಗಿದ್ದು, ಈಗಾಗಲೆ ಸಾಕಷ್ಟು ತಯಾರಿ ಮಾಡಿರುವೆ, ನನ್ನ ಬೆಂಬಲಿಗರು ಮಾಡಿಕೊಂಡಿದ್ದು ಪಕ್ಷದ ಎಲ್ಲ ಹಿರಿಯರಿಗೆ ಈ ವಿಷಯವಾಗಿ ಭೇಟಿಯಾಗಿ ಮಾತನಾಡಿದ್ದೇನೆ ನನ್ನ ಇಚ್ಛೆಯನ್ನು ಅವರ ಮುಂದೆ ಹೇಳಿಕೊಂಡಿದ್ದೇನೆ ಎಂದರು. ಬಂಜಾರಾ ಸಮುದಾಯ ಬಿಜೆಪಿಗೆ ವಿರೋಧವಿಲ್ಲ, ಒಬ್ಬರು ವಿರೋಧಿಸಿದರೆ ಇಢೀ ಸಮಾಜ ವಿರೋಧ ಎಂಬರ್ಥವಲ್ಲ, ಒಳ ಮೀಸಲಾತಿ ಬಗ್ಗೆ ಸ್ಪಷ್ಟತೆ ಇಲ್ಲ, ಹೀಗಾಗಿ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.
ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ಪ್ರಬಲ ಆಕಾಂಕ್ಷಿ ಸಹ ಹೌದು, ಆದರೆ ಅವಕಾಶ ಸಿಗದಿದ್ದರೂ ಸಹ ಬಿಜೆಪಿ ಕಾರ್ಯಕರ್ತನಾಗಿ ದುಡಿಯುವೆ, ಯಾರಿಗೆ ಟಿಕೆಟ್ ಒದಗಿಸಿದರೂ ಅವರ ಪರವಾಗಿ ನಾನು ದುಡಿಯುವೆ ಎಂದರು.