ವಿಜಯಪುರ: ಟ್ರ್ಯಾಕ್ಟರ್ ಕಳ್ಳತನಗೈದು ಪರಾರಿಯಾಗಿದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ರತ್ನಾಪುರ ಕ್ರಾಸ್ ಬಳಿ ನಡೆದಿದೆ.
ಮಹಾರಾಷ್ಟ್ರದ ಸಂಖ ಗ್ರಾಮದ ಸಂತೋಷ ಕಾಂಬ್ಳೆ, ದಿಲೀಪ್ ಕಾಂಬ್ಳೆ, ಸಚಿನ್ ಕಾಂಬ್ಳೆ ಬಂಧಿತ ಆರೋಪಿಗಳು. ಇನ್ನು ರತ್ನಾಪೂರನಲ್ಲಿ 2.50 ಲಕ್ಷ ಮೌಲ್ಯದ ಟ್ರ್ಯಾಕ್ಟರ್, ಟೆಲರ್ನ್ನು ಪೊಲೀಸರು ಜಪ್ತಿಗೈದಿದ್ದಾರೆ. ತನಿಖಾ ತಂಡದಲ್ಲಿ ಪಿಎಸ್ಐ ಶ್ರೀಕಾಂತ್ ಕಾಂಬ್ಳೆ, ಸಿಬ್ಬಂದಿಗಳಾದ ಎಂಬಿ ಜನಗೊಂಡ, ಜೆಎಸ್ ರಡರಟ್ಟಿ, ಎಸ್ನಿ ಶಿವೂರ್, ಎಸ್ಎನ್ ಸವದಿ, ಎಂಎಸ್ ಗೆರಡೆ ಇದ್ದರು.
ಈ ಕುರಿತು ತಿಕೋಟಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ತನಿಖಾ ತಂಡದ ಕಾರ್ಯಕ್ಕೆ ಎಸ್ಪಿ ಆನಂದಕುಮಾರ ಶ್ಲಾಘಿಸಿ, ನಗದು ಬಹುಮಾನ ಘೋಷಣೆ ಮಾಡಿದ್ದಾರೆ.