ವಿಜಯಪುರ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಕರ್ನಾಟಕದ ಚುನಾವಣೆ ಮೇಲೆ ಯಾವುದೇ ಪ್ರಭಾವ ಆಗೋದಿಲ್ಲ ಎಂದು ವಿಜಯಪುರದಲ್ಲಿ ಗುರುವಾರ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ ಹೇಳಿದರು.
ಗುಜರಾತ್ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಬಲವಾದ ಪ್ರಚಾರದಿಂದ ಸ್ವಾಭಿಕವಾಗಿ ಪ್ರಧಾನಿ ಅವರು ಅಲ್ಲಿವರೆಂದು ಜನ ಮತ ನೀಡಿದ್ದಾರೆ. ಗುಜರಾತ್ನಲ್ಲಿ ಸಾಕಷ್ಟು ಬಿಜೆಪಿ ಬಗ್ಗೆ ಅಪಸ್ವರ ಇದ್ರೂ ಬಿಜೆಪಿಗೆ ಮತದಾರರು ಮತ ನೀಡಿದ್ದಾರೆ.
ಮತದಾರರ ಫಲಿತಾಂಶ ನಾನು ಗೌರವಿಸುತ್ತೇವೆ ಎಂದರು.
ಬಿಜೆಪಿಯ ಭ್ರಷ್ಟಾಚಾರ, ೪೦% ಕಮೀಷನ್ ಸರಕಾರ ನೋಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಅಲೆ ಇದೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಬಗ್ಗೆ ಒಲವು ಹೊಂದಿದ್ದು, ಕರ್ನಾಟಕದಲ್ಲಿ 140 ಸೀಟ್ನಿಂದ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದರು.