ವಿಜಯಪುರ: ಈ ತಿಂಗಳ ಕೊನೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡ್ತೇವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರಿ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಹೊಸಬರಿಗೆ, ಹಳಬರಿಗೆ ಟಿಕೆಟ್ ಕೊಡ್ತೀವಿ. ಬರಿ ಹೊಸಬರಿಗೆ ಟಿಕೇಟ್ ಕೊಡಲ್ಲ. ಗೆಲ್ಲುವವರಿಗೆ ಟಿಕೆಟ್ ಕೊಡ್ತೀವಿ ಎಂದರು.
ಅಲ್ಲದೇ, ಮೂರು ಬಾರಿ ಸರ್ವೆ ಮಾಡಿಸಿದ್ದೀವಿ. ಯಾರು ಗೆಲ್ತಾರೆ, ಗೆಲ್ಲುವ ಸಾಧ್ಯತೆ ಇದೆ ಅದನ್ನ ನೋಡಿಕೊಂಡಿ ಟಿಕೆಟ್ ಕೊಡ್ತೀವಿ. ಸಾಮಾಜಿಕ ನ್ಯಾಯಕ್ಕೆ ಯಾವುದೇ ಲೋಪವಾಗಲ್ಲ. ಅಲ್ಪಸಂಖ್ಯಾತರಿಗೆ ಕೊಡಬೇಕು ಅನ್ನೋದೇನಿದೆ. ಅಲ್ಪಸಂಖ್ಯಾತರು ಗೆಲ್ತಾರೆ ಅನ್ನೋ ಕಡೆ ಕೊಡ್ತೀವಿ. ಹಿಂದೂಳಿದವರು ಗೆಲ್ಲುವ ಕಡೆಗೆ ಅವರಿಗೆ ಕೊಡ್ತೀವಿ. ಎಸ್ಸಿ ಎಸ್ಟಿ 51 ಸೀಟ್ ಇವೆ. ಗೆಲ್ಲೋರಿಗೆ ಕೊಡ್ತೀವಿ. ಯುವಕರಿಗೆ ಆದ್ಯತೆ ನೀಡಿದ್ದೇವಿ. ಅದೇ ತರಹ ವಯಸ್ಸಾದವರನ್ನ ಬಿಡ್ತೀವಿ ಅಂತಾ ಅಲ್ಲ. ಗೆಲುವಿಗೆ ನಮ್ಮ ಆದ್ಯತೆ ನೀಡಿ ರಾಜ್ಯದಲ್ಲಿ ಕನಿಷ್ಠ 130 ಸೀಟ ಬರುತ್ವೆ, 150 ಕ್ಷೇತ್ರಗಳಲ್ಲಿ ಗೆಲ್ತೀವಿ ಎಂದರು.