ವಿಜಯಪುರ: ಗುಂಡು ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಸಾತಿದಾರ್ ಕಾಲಿನ ಮೇಲೆ 125 ಕೆ.ಜಿ ತೂಕದ ಗುಂಡು ಕಲ್ಲು ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಬಸವಣ್ಣ ದೇವರ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುಂಡು ಕಲ್ಲು ಎತ್ತುವ ಸ್ಪರ್ಧೆ ಈ ಅವಘಡ ಆಗಿದೆ. ಸಾತಿದಾರ್ ಶಿವನಗೌಡ ಪಾಟೀಲ್ ಗಾಯಗೊಂಡಿದ್ದಾನೆ. 125 ಕೆ.ಜಿ ಗುಂಡು ಕಲ್ಲು ಎತ್ತುತ್ತಿದ್ದ ಪೈಲ್ವಾನ್ ಚಂದ್ರಶೇಖರ್ ಯಾಳವಾರ್ ಗುಂಡು ಕಲ್ಲು ಕೆಳಗಿಳಿಸುವ ವೇಳೆ ಸಾತಿದಾರ್ ಶಿವನಗೌಡ ಕಾಲು ಮೂಳೆ ಮುರಿತ ಆಗಿದೆ. ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿಗೆ ಎರಡು ರಾಡ್ ಅಳವಡಿಕೆ ಮಾಡಲಾಗಿದೆ.