ವಿಜಯಪುರ: ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ಗಾಗಿ ಭಾರೀ ಪೈಪೋಟಿ ಆರಂಭವಾಗಿದೆ. ಇನ್ನೂ ಈಗಾಗಲೇ ಕಾಂಗ್ರೆಸ್ನಿಂದ 224 ಮತಕ್ಷೇತ್ರಗಳ ಪೈಕಿ 124 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಎಂಟು ಮತಕ್ಷೇತ್ರದಲ್ಲಿ ನಾಲ್ಕು ಟಿಕೆಟ್ ಫೈನಲ್ ಆಗಿದ್ದು, ವಿಜಯಪುರ ನಗರ ಮತಕ್ಷೇತ್ರದಲ್ಲಿ ಮೂವರ ಹೆಸರು ಅತೀ ಹೆಚ್ಚು ಕೇಳಿಬರುತ್ತಿದೆ. ಮಾಜಿ ಶಾಸಕ ಮಕ್ಬುಲ್ ಬಾಗವಾನ್, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ ನಡುವೆ ಉದ್ಯಮಿ ಶಾಹೀದ್ ಹೊರ್ತಿ ಹೆಸರು ಮುಂಚಿನಯಲ್ಲಿ ಇದೆ ಎಂದು ಕಾಂಗ್ರೆಸ್ನಲ್ಲಿ ಸಂಚಲನವನ್ನು ಮೂಡಿಸಿದೆ. ಶಾಸಕರ, ಕಾಂಗ್ರೆಸ್ ನಾಯಕರ ಆಶೀರ್ವಾದ ಶಾಹೀದ್ ಹೊರ್ತಿ ಮೇಲಿದೆ. ಅದಕ್ಕಾಗಿ ಈ ಬಾರಿ ಹೊರ್ತಿಗೆ ಟಿಕೆಟ್ ಸಿಗುವ ಸಂಭವ ಇದೆ ಎಂದು ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.