ವಿಜಯಪುರ: ಭೀಮಾತೀರದ ರೌಡಿಶೀಟರ್ ಹಾಗೂ ಭೀಮಾತೀರದ ಹಂತಕ ಚಡಚಣ ಆಪ್ತ ಜೈಲಿನಿಂದ ಚಿನ್ನದ ಅಂಗಡಿ ಮಾಲೀಕನಿಗೆ ಧಮ್ಕಿ ಹಾಕಿರುವ ಘಟನೆ ವಿಜಯಪುರದ ರಹೀಂ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ರಹೀಂನಗರ ನಿವಾಸಿ ಕಮ್ ಚಿನ್ನದ ಅಂಗಡಿ ಮಾಲೀಕ ಸೈಫೋದ್ದೀನ ಶೇಖ್ಗೆ ಧಮ್ಕಿ ಹಾಕಿದ್ದಾರೆ. ಮಡುಸ್ವಾಮಿ, ಶಿವಾನಂದ ಚಿಕ್ಕೋಡಿ, ಅಕ್ಬರ್ ಬಾಗವಾನ್, ಶಿವಾಜಿ ಚವ್ಹಾಣ, ಸಿದ್ದು ಸೇರಿದಂತೆ 14 ಜನರ ವಿರುದ್ಧ ಕೇಸ್ ದಾಖಲು ಆಗಿದೆ.
ಘಟನೆ ವಿವಿರ..
ಚಿನ್ನದ ಅಂಗಡಿ ಮಾಲೀಕ ಸೈಫೋದ್ದೀನ್ ಶೇಖ್ಗೆ ಜೈಲಿನಲ್ಲಿರುವ ಭೀಮಾತೀರದ ರೌಡಿಶೀಟರ್, ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಬಲಗೈ ಬಂಟ್ ಹಾಗೂ ಮಹಾದೇವ ಸಾಹುಕಾರ್ಗೆ ಹತ್ಯೆಗೆ ಸಂಚು ರೂಪಿಸಿದ ಅಂದರ್ ಆಗಿರುವ ಮಡುಸ್ವಾಮಿ ಕಾಲ್ ಮಾಡಿ ಇಂಡಿ ರಸ್ತೆಯ ಜಾಗದ ಪತ್ರ ನೀಡಬೇಕು. ಅದರಲ್ಲಿ ಅರ್ಧ ಭಾಗ ನೀಡುಬೇಕು. ಇದಲ್ಲದೇ ಹೋದ್ರೇ ಒಂದು ಕೋಟಿ ಹಣ ತಂದುಕೊಡು ಎಂದು ಜೀವನ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ನೀ ಜೀವಂತ ಇರಬೇಕು ಅಂದ್ರೆ ಒಂದು ಕೋಟಿ ಹಣ ನೀಡು ಇಲ್ಲದೇ ಹೋದ್ರೇ ನನ್ನಜೊತೆಗೆ 100 ಹುಡುಗರು ಇದ್ದಾರೆ. ನಿನ್ ಕಲಾಸ್ ಮಾಡ್ತಾರೆ ಎಂದು ಖಡಕ್ ಅವಾಜ್ ಹಾಕಿದ್ದಾನೆ. ತದನಂತರ ಬಸ್ ನಿಲ್ದಾಣದ ಬಳಿ ಹೋದಾಗ ಮಡುಸ್ವಾಮಿ ಹುಡುಗರು ಶೇಖ್ಗೆ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.