ವಿಜಯಪುರ: ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದ್ರೇ ಬಿವೈ ವಿಜಯೇಂದ್ರನಿಂದ ಎಂದು ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ಮಾಡಿದರು.
ವಿಜಯಪುರ ನಗರದಲ್ಲಿ ಸೋಮವಾರ ಮಾತನಾಡಿದ ಅವರು, ವಿಜಯೇಂದ್ರದಿಂದ ಬಿಎಸ್ವೈ ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ. ಪಾಪ ಬಿಎಸ್ವೈ ಅಧಿಕಾರಿ ಕಳೆದುಕೊಂಡ್ರೂ, ಇಲ್ಲದೇ ಹೋದ್ರೇ ಅವರೇ ಸಿಎಂ ಇರ್ತಾ ಇದ್ರೂ ಎಂದರು. ಇನ್ನೂ
ವಿಜಯೇಂದ್ರ ಯಾವಾಗ ಯಾವಾಗ ಹಗಣರ ಮಾಡಿದ್ರಾರೆ ಅವಾಗ ಬಿಎಸ್ವೈ ರಾಜೀನಾಮೆ ನೀಡಿದ್ದಾರೆ. ಆ ಭ್ರಷ್ಟಾಚಾರದಿಂದ ಬಿಜೆಪಿ ಹೆಸರು ಕೆಟ್ಟಿದೆ. ಯತ್ನಾಳನಿಂದ ಅಲ್ಲ. ಮಗನ ಮಾತು ಕೇಳಿ ಅಧಿಕಾರ ನಡೆಸಬಾರದು. ಬಿಎಸ್ವೈ ಒಳ್ಳೆಯವರು ಇದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಣ್ಣೀರಿಗೆ ವಿಜಯಪುರದಲ್ಲಿ ಶಾಸಕ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ. ಇವೆಲ್ಲ ನಾಟಕ ಕಂಪನಿ. ಅಳುವ ಗಂಡಸರನ್ನ ನೋಡಬಾರದು ಎಂದು ಡಿಕೆಶಿಗೆ ಅಳುವ ಗಂಡಸು ವ್ಯಂಗ್ಯವಾಗಿ ಹೇಳಿದರು. ಭಾರತ ಜೋಡೋ ಯಾತ್ರೆಯಲ್ಲಿ ಕಣ್ಣೀರು ಹಾಕೋರೆಲ್ಲ ಮಹಾಕಳ್ಳರು. ಗ್ಲೀಸರಿನ್ ಹಚ್ಚಿಕೊಂಡು ಅಳ್ತಿದ್ದಾರೆ. ಈ ಪುಣ್ಯಾತ್ಮನಿಗೆ ಹೇಗೆ ಕಣ್ಣೀರು ಬರುತ್ತೆ ಯಾರಿಗೆ ಗೊತ್ತು ಎಂದು ವಾಗ್ದಾಳಿ ಮಾಡಿದರು. ಇವರೆಲ್ಲ ಕಣ್ಣೀರು ಹಾಕೋರಲ್ಲ, ಲೂಟಿ ಹೊಡೆಯುವವರು. ಕಣ್ಣೀರು ಹಾಕಿದವರು ನಿಮ್ಮ ಆಸ್ತಿಯನ್ನ ಬಡವರಿಗೆ ಹಂಚಿ ಬಿಡಿ ಎಂದು ಯತ್ನಾಳ್ ಸವಾಲು ಹಾಕಿದರು.
ಶಾಸಕ ಪ್ರೀಯಂಕಾ ಖರ್ಗೆ ಮಾಡಿದ ಆಸ್ತಿಯನ್ನ ಕಲಬುರ್ಗಿಯ ದಲಿತರಿಗೆ ಹಂಚಿ ಬಿಡಲಿ. ಎಲ್ಲ ದಲಿತ ಕುಟುಂಬಗಳಿಗೆ ಒಂದೊಂದು ಮನೆ ಕಟ್ಟಿ ಕೊಡಲಿ. ಇವರಿಗೆ ಬಡವರ ಬಗ್ಗೆ ಕನಿಕರ ಇಲ್ಲ ಎಂದರು. ಅಲ್ಲದೇ, ಸಾವಿರಾರು ಕೋಟಿಗಟ್ಟಲೆ ನಮ್ಮ ದೇಶದಲ್ಲಿ ಲೂಟಿ ಮಾಡಿದ್ದಾರೆ. ಮೋದಿ ನ ಕಾವುಂಗಾ ನ ಕಿಲಾ ಉಂಗಾ ಎಂದಿದ್ದಾರೆ.. ನಮ್ಮವರ ಮೇಲು ರೇಡ್ ಆಗಿದೆ.
ಇದು ಭಾರತ ಜೋಡೋ ಅಲ್ಲ, ಭಾರತ ತೋಡೋ ಯಾತ್ರೆ. ಭಾರತ ಜೋಡೊ ಯಾತ್ರೆ ಮಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದರು.