ಬಾಗಲಕೋಟ: ಮೊಟ್ಟಮೊದಲ ಬಾರಿಗೆ ಬಸವೇಶ್ವರ ಜಾತ್ರೆಯಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಮರೇಗುದ್ದಿ ಅಡವಿಸಿದ್ಧೇಶ್ವರ ಮಠದ ಶ್ರೀ ಮನಿಪ್ರ ನಿರುಪಾಧೀಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಬಸವೇಶ್ವರ ಜಾತ್ರೆ ಅಂಗವಾಗಿ ರಥೋತ್ಸವ ನಡೆಯಿತು. ಬಸವೇಶ್ವರ ದೇವಸ್ಥಾನದಿಂದ ಚಿಕ್ಕ ರಥದಲ್ಲಿ ವಿಶ್ವ ಗುರು ಬಸವಣ್ಣನವರ ಫೋಟೊ ಇಟ್ಟು ರಥೋತ್ಸವ ಆರಂಭವಾಗಿ, ತದನಂತರ ಜಾನಮಟ್ಟಿ ಸರ್ಕಾರಿ ಶಾಲೆಯಿಂದ ವಾಲ್ಮೀಕಿ ಭವನದ ವರೆಗೆ ರಥೋತ್ಸವ ನಡೆಯಿತು. ಬಳಿಕ ವಾಲ್ಮೀಕಿ ಭವನದಿಂದ ಶಾಲೆಯ ವರೆಗೂ ಮರಳಿ ರಥೋತ್ಸವ ನೆರವೇರಿಸಿ ರಥೋತ್ಸವ ಮುಕ್ತವಾಯಿತು. ರಥೋತ್ಸವದಲ್ಲಿ ಅಡವಿಸಿದ್ಧೇಶ್ವರ ಮಠದ ಶ್ರೀ ಮನಿಪ್ರ ಗುರುಪಾದ ಮಹಾಸ್ವಾಮಿಗಳು ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡದಿಂದ ಡ್ಯಾನ್ಸ್ ಮೂಲಕ ಮೆರವಣಿಗೆ ಮಾಡಲಾಯಿತು. ರಥೋತ್ಸವ ವೇಳೆಯಲ್ಲಿ ಸಾವಿರಾರು ಭಕ್ತರು ರಥಕ್ಕೆ ಖರ್ಜೂರ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಜಾನಮಟ್ಟಿ ಸೇರಿದಂತೆ ಪಕ್ಕದ ತಾಲೂಕಿನ ಜನತೆ ಕೂಡ ರಥೋತ್ಸವದಲ್ಲಿ ಭಾಗವಹಿಸಿದವರು.