ವಿಜಯಪುರ: ಜಿಲ್ಲಾಧಿಕಾರಿರೊಬ್ಬರು ತಾವು ಹೋಗುತ್ತಿದ್ದ ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಿರುವ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ಹೌದು..! ವಿಜಯಪುರ ನಗರದ ಮನಗೂಳಿ ಅಗಸಿ ಬಳಿಯ ಕಮಾನ್ ಬಳಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಇರುತ್ತದೆ. ಆದ್ರೇ, ಜಿಲ್ಲಾ ಪಂಚಾಯತದಿಂದ ಮರಳಿ ಮನೆಗೆ ಹೋಗುವಾಗ ಮನಗೂಳಿ ಅಗಸಿ ಬಳಿ ಟ್ರಾಫಿಕ್ ಸಮಸ್ಯೆ ಆಗಿದೆ. ಈ ವೇಳೆ ಕಾರಿನಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಇಳಿದು ಸ್ವತಃ ಟ್ರಾಫಿಕ್ ಸಮಸ್ಯೆ ಕ್ಲಿಯರ್ ಮಾಡಿದ್ದಾರೆ. ಇದರಿಂದ ಸ್ಥಳೀಯರು ಡಿಸಿ ಭೂಬಾಲನ್ ಕಾರ್ಯಕ್ಕೆ ಎಲ್ಲೆಡೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದ್ರೇ ಇಂತಹ ಡಿಸಿ ಇರಬೇಕು ಎನ್ನುತ್ತಿದ್ದಾರೆ.
![](https://karnataka1news.com/wp-content/uploads/2023/12/IMG-20231221-WA0155-1024x576.jpg)