ವಿಜಯಪುರ: ವಿಜಯಪುರ ನಗರದ ಜಲನಗರ ಪೊಲೀಸ(Police) ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಹತ್ಯೆಯ ಫುಲ್ ಡಿಟೈಲ್ಸ್ ಕೇಳಿದ್ರೇ ಒಂದು ಕ್ಷಣ ನೀವು ಬೆಚ್ಚಿ ಬಿಳ್ತೀರಾ.. ಹೌದು.. ನಗರದ ಕನಕದಾಸ ಬಡಾವಣೆಯಲ್ಲಿ ಓರ್ವನ್ನು ದುಷ್ಕರ್ಮಿಗಳು ಹತ್ಯೆಗೈದಿರುವ((Murder) ಬಗ್ಗೆ ನೋಡಿದ್ರೇ ಇದೊಂದು ಫ್ರೀ ಪ್ಲ್ಯಾನ್ ಮರ್ಡರ್ ಆಗಿದೆ. ಓರ್ವನ್ನು ಹತ್ಯೆಗೈದು ಬಲಗೈ ಹಸ್ತ(Right Hand) ಹಾಗೂ ಎಡಕಾಲನ್ನು ಕಟ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಅಲ್ಲದೇ, ಮುಖದ ಚಹರೆಯ ಗುರುತು ಸಿಗದಂತೆ ಹಾಳು ಮಾಡಿದ್ದಾರೆ. ಈ ಕೃತ್ಯಗೈದಿರುವ ಆರೋಪಿಗಳ ಬಂಧನಕ್ಕೆ ಜಲನಗರ ಪೊಲೀಸರು ಬಲೆ ಬೀಸಿದ್ದಾರೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.