ವಿಜಯಪುರ: ಜಿಲ್ಲೆಗೊಂದು ವಿಶ್ವವಿದ್ಯಾಲಯವನ್ನು ಶಾಸಕ ಯತ್ನಾಳ ವಿರೋಧಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿವಿ ಅವ್ಯವಹಾರ, ವಿಸಿ ನೇಮಕಾತಿಯಲ್ಲಿ ಭ್ರಷ್ಟಾಚಾರ ಬಾಂಬ್ನ್ನು ಯತ್ನಾಳ ಸಿಡಿಸಿದರು. ಉಪಕುಲಪತಿ ನೇಮಕವಾಗಲು ನಾಲ್ಕೈದು ಕೋಟಿ ಡೀಲ್ ಆಗಿರುತ್ತದೆ.
ನನ್ನ ಅಭಿಪ್ರಾಯದಲ್ಲಿ ಜಿಲ್ಲೆಗೊಂದು ವಿವಿ ಮಾಡಬಾರದು. ಎರಡು ಸಾವಿರ ಕೋಟಿ ವಿವಿಗೆ ಹಾಕುತ್ತೀರಿ ಅದು ವೇಸ್ಟ್. 2ನೂರು3ನೂರು ಜಮೀನು ಹೊಡೆದುಕೊಂಡು ಕುಳಿತು ಬಿಡ್ತಾರೆ ಎಂದು ವಾಗ್ದಾಳಿ ಮಾಡಿದರು.
ಒಳ್ಳೆ, ಪ್ರಾಮಾಣಿಕ ವಿಸಿ ನೇಮಕ ಆಗಬೇಕು. ಈಗ ಒಂದೊಂದು ಉದ್ಯೋಗ ಆಗಿದೆ ಎಂದರು.
ಅಲ್ಲದೇ, ವಿವಿಧ ಇಲಾಖೆಗಳಿಂದ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಸೆಪ್ಟೆಂಬರ್ 9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ನಗರದ ಜನತೆಯ ಆಶೀರ್ವಾದದಿಂದ ಆಯ್ಕೆಯಾಗಿ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.
ವಿಜಯಪುರ ನಗರದ ಗಲ್ಲಿಗಲ್ಲಿಗಳಲ್ಲಿಯೂ ಸಿಸಿ ರಸ್ತೆ ನಿರ್ಮಾಣವಾಗಿದೆ, ಉದ್ಯಾನನವಗಳಲ್ಲಿ ಓಪನ್ ಜಿಮ್ ನಿರ್ಮಾಣ, ಈಜುಕೊಳಗಳು ನಿರ್ಮಾಣಗೊಂಡಿವೆ ಎಂದು ವಿವರಿಸಿದರು.