ಧಾರವಾಡ: ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಹಣವನ್ನು ಪೋಲಿಸ್ ಠಾಣೆಗೆ ನೀಡಿ, ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ. ಧಾರವಾಡದ ಶಿವಾನಂದ ನಗರದ ಆಟೋ ಚಾಲಕ ಅಲಿ ಅತ್ತಾರ ಎಂಬುವವರು ತಮ್ಮ ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಬ್ಯಾಗ್, ಬ್ಯಾಗಿನಲ್ಲಿದ್ದ 20 ಗ್ರಾಂ ಚಿನ್ನಾಭರಣ ಮತ್ತು 1020 ರೂ ಹಣವನ್ನು ಧಾರವಾಡ ಶಹರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ತದನಂತರ ಅವುಗಳನ್ನು ಶಹರ ಠಾಣೆಯ ಪೊಲೀಸ ಎಸ್ ಎಸ್ ನಸ್ರೇಕರ (HC-1550) ಸಮ್ಮುಖದಲ್ಲಿ ಮೂಲ ವಾರಸುದಾರರಾದ ಶರತ್ ಬುಡ್ಡಣ್ಣವರ ಎಂಬುವವರಿಗೆ ಹಸ್ತಾಂತರ ಮಾಡಿದರು.