ವಿಜಯಪುರ: ಆಟೋದಲ್ಲಿ ಬಿಟ್ಟು ಹೋಗಿದ್ದ ನಗದು ಹಾಗೂ ಮೊಬೈಲ್ಗಳನ್ನು ಪ್ರಯಾಣಿಕರಿಗೆ ಮರಳಿಸಿ ಆಟೋ ಚಾಲಕ ಮಾನವೀಯತೆ ಮೆರೆದಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ನಲ್ಲಿ ನಡೆದಿದೆ.
ಕೆಎ 28 ಡಿ 1498 ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ. ನಗರ ಗಾಂಧಿಚೌಕ್ ಮಾರ್ಗದಲ್ಲಿ ಆಟೋದಲ್ಲಿ ಮಹಿಳೆಯೋರ್ವಳು 30 ಸಾವಿರ ನಗದು, ಎರಡು ಮೊಬೈಲ್ ಬಿಟ್ಟು ಹೋಗಿದ್ದರು. ಅದನ್ನು ಮರಳಿಸಿ ಆಟೋ ಚಾಲಕ ಶಹಬಾಷ್ ಗಿರಿ ಪಡೆದುಕೊಂಡಿದ್ದಾನೆ. ಈ ವೇಳೆಯಲ್ಲಿ ಎಎಸ್ಐಗಳಾದ ವಿಜಿ ಬಿರಾದಾರ, ಇಜೇರಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.