ವಿಜಯಪುರ: ಸಿಎಂ ಬದಲಾವಣೆ ಆಗಲ್ಲ ಎಂದು ವಿಜಯಪುರದ ನಾಗಠಾಣದಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದರು. ನಾಗಠಾಣದಲ್ಲಿ ಬಸ್ ತಂಗುದಾಣ ಉದ್ಘಾಟಿಸಿ, ನಂತರ ಮಾತನಾಡಿದ ಅವರು, ಇವೆಲ್ಲಾ ಊಹಾಪೋಹ, ಗಾಳಿ ಸುದ್ದಿಗಳಿಗೆ ಬಹಳ ಬೆಲೆ ಕೊಡಬಾರದು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ. ಅಲ್ಲದೇ, ನಾನೇನು ಸಿಎಂ ಆಗಲ್ಲ, ಇವೆಲ್ಲವೂ ಗಾಳಿ ಸುದ್ದಿ ಆಗಿದೆ. ನಮ್ಮ ಇಲಾಖೆ ಕೆಲಸ ಕಾರ್ಯಗಳಿಗಾಗಿ ದೆಹಲಿಗೆ ಹೋಗಿದ್ದೇನೆ. ನನ್ನ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಬಂದಿದ್ದರು ಎಂದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿಗೆ ಬಹುತೇಕ ಕಾನೂನು ಸ್ವಲ್ಪ ಕೊರತೆ ಆಗಿದಂತೆ ಕಾಣುತ್ತದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು. ಬೆಳಗಾವಿ ಮೇಯರ್ ಎಲೆಕ್ಷನ್ ವಿಳಂಬಕ್ಕೆ ಟೀಕೆ ಮಾಡಿದ್ದ ಜಾರಕಿಹೊಳಿಗೆ ಸವದಿ ಟಾಂಗ್ ನೀಡಿದರು.
ಸುಪ್ರೀಂ ಕೋರ್ಟ್ ಈಗಾಗಲೇ ಒಂದು ನಿರ್ದೇಶನ ಕೊಟ್ಟಿದೆ. ಬ್ಯಾಕ್ ವರ್ಡ್ ಕ್ಲಾಸ್ ರಿಸರ್ವೇಶನ್ ತೆಗೆದು ಹಾಕಿದೆ ಎಂದರು. ಕಾಂಗ್ರೆಸ್ಸಿಗರು ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಜನ ಅವರ ಮೇಲಿಟ್ಟಿರೋ ಪ್ರೀತಿ ಕಡಿಮೆಯಾಗಿದೆ. ಜನರ ದಿಕ್ಕು ಬೇರೆಡೆ ತಿರುಗಿಸಲು ಈ ರೀತಿ ಮಾಡಿರುತ್ತಾರೆ ಎಂದರು.