ವಿಜಯಪುರ: 25 ವರ್ಷ ಬಿಜೆಪಿ ಪಕ್ಷದಲ್ಲಿದೆ. ಪಕ್ಷದ ಆಳ ಅಗಲ ನೋಡಿ ಬಂದಿದ್ದೇನೆ ಎಂದು ಬಿಜೆಪಿ ವಿರುದ್ಧ ಶಾಸಕ ಲಕ್ಷ್ಮಣ ಸವದಿ ಕಿಡಿಕಾರಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ ಮತ ಪಡೆಯೋದನ್ನ ನಾನು ನೋಡಿದ್ದೇನೆ. ಪ್ರಧಾನಿ ಮೋದಿ ಭಾಷಣ ಸೂಕ್ಷ್ಮ ವಾಗಿ ಗಮನಿಸಿದ್ದೇನೆ. ಮೋದಿ ರಾಜಕಾರಣದಲ್ಲಿ ವಿಫಲರಾಗಿದ್ದಾರೆ. ಮೋದಿ ಮಾತು ಕೇಳಿದ್ರೆ ರಾಜಕಾರಣದಲ್ಲಿ ವಿಫಲರಾಗಿದ್ದಾರೆ ಎನಿಸುತ್ತದೆ ಎಂದರು. ಇನ್ನೂ ಕಾಂಗ್ರೆಸ್ ಚೊಂಬಿನ ಬಗ್ಗೆ ಶ್ರೀರಾಮೂಲು ಹೇಳಿಕೆಗೆ ಚುನಾವಣೆ ಬಳಿಕ ಕಾಂಗ್ರೆಸ್ ಚೊಂಬು ಹಿಡಿದು ಅಡ್ಡಾಡಬೇಕಿದೆ ಎಂದ ಶ್ರೀರಾಮೂಲು ಹೇಳಿಕೆಗೆ ಸವದಿ ವಾಗ್ದಾಳಿ ನಡೆಸಿ, ರಾಮೂಲುಗೆ ಬಳ್ಳಾರಿ ಜನ ಚೊಂಬು ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲು ಜನ ಚೊಂಬೂ ಕೊಟ್ಟಿದ್ದಾರೆ. ಈ ಚುನಾವಣೆಯಲ್ಲು ಚಂಬು ಕೊಡ್ತಾರೆ. ಚೊಂಬು ಹಿಡಿದುಕೊಂಡ ಓಡಾಡಲಿ ಎಂದು ಸವದಿ ವ್ಯಂಗ್ಯವಾಡಿದರು.ಅಥಣಿ, ರಾಯಭಾಗ, ಕಾಗವಾಡ ಕುಡಚಿ ಭಾಗದಲ್ಲಿ ಬಿಜೆಪಿ ಬೆಳೆಸಿದ್ದು ನಾನೇ. ಬಿಜೆಪಿಯಲ್ಲಿದ್ದಾಗ ಅಥಣಿ, ರಾಯಭಾಗ, ಕಾಗವಾಡ, ಕುಡಚಿ ಕ್ಷೇತ್ರದಲ್ಲಿ ಒಬ್ಬನೇ ಪಂಚಾಯ್ತಿ ಸದಸ್ಯ ಇರಲಿಲ್ಲ. ಆ ಭಾಗದಲ್ಲಿ ನನ್ನಿಂದಲೇ ಬಿಜೆಪಿ ಬೆಳೆದಿದ್ದು. ನಾನೆ ಪಕ್ಷವನ್ನ ಬೆಳೆಸಿದ್ದೆ. ನನ್ನ ರಕ್ತ ಬಸಿದು ಪಕ್ಷವನ್ನ ಬೆಳೆಸಿದ್ದೆ. ಅದೆ ಕಾರಣಕ್ಕೆ ಡಿಸಿಎಂ ನೀಡಿದ್ದರು, ವಾಪಸ್ ಕಿತ್ತುಕೊಂಡಿದ್ಯಾಕೆ ಬಿಜೆಪಿಯಿಂದ ಅನ್ಯಾಯವಾಯ್ತು ಎಂದರು. ನನಗೆ ಕಾಂಗ್ರೆಸ್ ಪಕ್ಷ ಗೌರವ ಕೊಟ್ಟಿದೆ. ಕಾಂಗ್ರೆಸ್ ನನ್ನ ಮನೆಗೆ ಬಿ ಪಾರಂ ಕಳುಹಿಸಿತ್ತು. ವಿಶೇಷ ವಿಮಾನದ ಮೂಲಕ ನನಗೆ ದೆಹಲಿ ಕರೆದುಕೊಂಡು ಹೋದರು. ನನಗೆ ನನ್ನ ಗೌರವ ಇದೆ. ಬಿಜೆಪಿಯದ್ದು ಮೊಸಳೆ ಕಣ್ಣೀರು. ಸವದಿಯನ್ನ ಯಾಕೆ ಬಿಟ್ವಿ ಎಂದು ಸಂಕಟ ಪಟ್ಟಿದ್ದಾರೆ. ಲಕ್ಷ್ಮಣ ಸವದಿಯನ್ನ ಯಾಕೆ ಬಿಟ್ಟು ಕೊಟ್ವಿ ಅಂತ ಚುನಾವಣೆ ಬಳಿಕ ಮತ್ತಷ್ಟು ಸಂಕಟ ಪಡಬೇಕು ಎಂದು ಬಿಜೆಪಿಗೆ ಸವದಿ ಚಾಟಿ ಬೀಸಿದರು.