ವಿಜಯಪುರ: ಪಾಪ ನನ್ನ ಮೇಲೆ ಬಹಳ ಪ್ರೀತಿಯಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡು ಅಂತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದಾರೆ, ಅವರಿಗೆ ಧನ್ಯವಾದಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಜಯಪುರ ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ನಾನು ಬಾದಾಮಿಯಲ್ಲಿ ಗೆಲ್ಲಲ್ಲಾ ಅಂತಲ್ಲ. ಬಾದಾಮಿಯಲ್ಲಿ ೧೦೦ಕ್ಕೆ ೧೦೦ಗೆದ್ದೆ ಗೆಲ್ತಿನಿ ಗೊತ್ತಾಯ್ತಾ? ಐದು ವರ್ಷ ಶಾಸಕನಾಗಿ ಆ ಜನ್ರಿಗೆ ಕೆಲಸ ಮಾಡಿದಿನಿ, ಅವರ ಕಷ್ಟ ಸುಖಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ.
ಆದ್ರಿಂದ ಜನ್ರಿಗೆ ದ್ರೋಹ ಮಾಡೋ ಪ್ರಶ್ನೆನೆ ಬರೋದಿಲ್ಲ.ಯಡಿಯೂರಪ್ಪಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ. ದೇವರು ಅವರಿಗೆ ಆಯುಷ್ಯ, ಆರೋಗ್ಯ ಕೊಡಲಿ ಎಂದು ಪ್ರಾರ್ಥನೆ ಮಾಡ್ತೆನೆ.
ನಾನು ಎಲ್ಲಿ ನಿಲ್ತಿನಿ ಅನ್ನೋದು ನಾನು ತೀರ್ಮಾನ ಮಾಡಬೇಕು. ನಾನು ಎಲ್ಲಿ ನಿಲ್ತಿನಿ ಅನ್ನೋದನ್ನ ನಾನು ಹೇಳ್ತೆನೆ, ಅದರ ಮೇಲೆ ಕಾಂಗ್ರೆಸ್ ತೀರ್ಮಾನ ಮಾಡ್ತದೆ.
ಯಡಿಯೂರಪ್ಪ ಯಾರು ತೀರ್ಮಾನ ಮಾಡೋಕೆ? ಎಂದು ವಾಗ್ದಾಳಿ ಮಾಡಿದರು.
ನನ್ಮೇಲೆ ರಾಜಾಹುಲಿಗೆ ಲವ್ ಜಾಸ್ತಿ
![ನನ್ಮೇಲೆ ರಾಜಾಹುಲಿಗೆ ಲವ್ ಜಾಸ್ತಿ ನನ್ಮೇಲೆ ರಾಜಾಹುಲಿಗೆ ಲವ್ ಜಾಸ್ತಿ](https://karnataka1news.com/wp-content/uploads/2023/02/IMG_20230223_115113-860x475.jpg)