ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಪ್ರತಿಯೊಬ್ಬರ ಹಕ್ಕು. ಅದಕ್ಕಾಗಿ ತಪ್ಪದೇ ಮತದಾನದ ಹಕ್ಕು ಚಲಾಯಿಸಿ ಎಂದು ವಿಜಯಪುರದ ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಆದರ್ಶನಗರ ಪೊಲೀಸರು ಮತದಾನದ ಜಾಗೃತಿ ಮೂಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ ಇಲಾಖೆ ವತಿಯಿಂದ ಪಂಥ ಸಂಚಲನ ನಡೆಸಿದರು. ವಿಜಯಪುರದ ಭೂತನಾಳ ಎಲ್ಟಿ ತಾಂಡಾ ಸೇರಿದಂತೆ ಆದರ್ಶನಗರ ಠಾಣಾ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಯಿತು. ಡಿವೈಎಸ್ಪಿ ಸಿದ್ಧೇಶ್ವರ ಹಾಗೂ ಆದರ್ಶನಗರ ಠಾಣಾ ಪಿಎಸ್ಐ ಯತೀಶ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಪೊಲೀಸರು, ಮೀಸಲು ಪಡೆಯವರ ಪಥ ಸಂಚಲನ ಮಾಡಿದರು. ಅಲ್ಲದೇ, ಪಥ ಸಂಚಲನದಲ್ಲಿ ಮತದಾನದ ಹಕ್ಕಿನ ಕುರಿತು ಜಾಗೃತಿ ಮಾಡಿದರು.