ವಿಜಯಪುರ: ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಮರಣ ಪಡಿಸಿದ ಆರೋಪಿಗೆ 6 ತಿಂಗಳು ಶಿಕ್ಷೆ ಹಾಗೂ 4 ಸಾವಿರ ದಂಡ ವಿಧಿಸಿ ವಿಜಯಪುರ ಜಿಲ್ಲೆಯ 3ನೇ ಅಪರ ಸಿವಿಲ್ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಪರಶುರಾಮ ವಿಠ್ಠಲ ಪೂಜಾರಿ ಶಿಕ್ಷೆಗೊಳಗಾದವರು. ಬೈಕ್ ಸವಾರ ಆನಂದ ಚಂದನಕೇರಿ ಮೃತಪಟ್ಟಿರುವ ದುರ್ದೈವಿ ಆಗಿದ್ದರು. ಇನ್ನೂ 16-04-2017 ರಂದು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಬಿಜ್ಜರಗಿ ಕನಮಡಿ ರಸ್ತೆಯಲ್ಲಿ ಟಿಪ್ಪರ್ ವಾಹನ ಹಾಗೂ ಬೈಕ್ ಮಧ್ಯೆ ಡಿಕ್ಕಿಯಾಗಿತ್ತು. ಇನ್ನೂ ಆರೋಪಿ ಪರಶುರಾಮ ಬಳಿ ವಾಹನ ಚಲಾವಣೆಯ ಲೈಸೆನ್ಸ್ ಇಲ್ಲದೇ ವಾಹನ ಚಲಾವಣೆ ಮಾಡಿ ಅಪಘಾತ ಪಡಿಸಿದ್ದರು. ಅಲ್ಲದೇ, ಪ್ರಕರಣದಲ್ಲಿ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಮಾದೇಶ ಎಂ.ವಿ ಅವರು 6 ತಿಂಗಳು ಶಿಕ್ಷೆ, 4 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಎಂಎಲ್ ಹಳ್ಳೂರ ವಾದ ಮಂಡಿಸಿದ್ದಾರೆ.