ವಿಜಯಪುರ: ಧರ್ಮದ ವಿಷಯದಲ್ಲಿ ಯಾರು ಕೈ ಹಾಕಿದ್ರೂ ಉಳಿಯುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದಲ್ಲಿ ಕೈ ಹಾಕಿದ್ರೇ ಯಾರು ಉಳಿಯುವುದಿಲ್ಲ. ಅದೇ ತರಹ ಅವರ ಪಕ್ಷ ಕೂಡ ಉಳಿಯುವುದಿಲ್ಲ ಎಂದು ಸ್ಟಾಲಿನ್ ವಿರುದ್ಧ ಕಿಡಿಕಾರಿದರು. ಇನ್ನೂ ಧರ್ಮದಲ್ಲಿ ಯಾರು ಕೈ ಹಾಕಬಾರದು. ಇದು ತಪ್ಪು. ಅದಕ್ಕಾಗಿ ಧರ್ಮದಲ್ಲಿ ಯಾರು ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ತಪ್ಪಲ್ಲ. ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಹೋಗ್ತಿವಿ ಎಂದರೆ ತಪ್ಪಾಗಲಾರದು. ಪಕ್ಷ ನಿರ್ಣಯ ಮಾಡಿದ್ರೆ ಒಪ್ಪಿಗೆ ಇದೆ. ಪಕ್ಷದವರು ನಿರ್ಣಯ ಮಾಡಿದ್ರೆ ನಾನು ಸ್ವಾಗತ ಮಾಡ್ತೇನೆ. ಹಿಂದೆ ದೇವೆಗೌಡರ ಸರ್ಕಾರದಲ್ಲಿ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದರು.