ವಿಜಯಪುರ: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪ್ಲಾಸ್ಟಿಕ್ ಅಂಗಡಿಯ ಮೇಲೆ ಮಹಾನಗರ ಪಾಲಿಕೆಯ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರದ ರಾಮ ಮಂದಿರ ಬಳಿ ಮಂಗಳವಾರ ನಡೆದಿದೆ. ವಿ. ರುಣವಾಲ್ ಪ್ಯಾಕೇಜಿಂಗ್ ಅಂಗಡಿಯ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿಗೈದು ಲಕ್ಷಾಂತರ ಮೌಲ್ಯದ ಅಕ್ರಮ ಪ್ಲಾಸ್ಟಿಕ್ ಜಪ್ತಿಗೈದಿದ್ದಾರೆ. ಮಹಾನಗರ ಪಾಲಿಕೆಯ ಆಯುಕ್ತ ಸೌದಾಗರ್ ಆದೇಶದ ಮೇರೆಗೆ ದಾಳಿಗೈದು ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಪೆಪರ್ ಸೇರಿದಂತೆ ವಿವಿಧ ಪ್ಲಾಸ್ಟಿಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ವೆಂಕಟರಾಮಲು, ಪ್ರವೀಣ ಕಂಬಳಿ, ಸಂಜು ಅಥಣಿ, ಶಿಲ್ಪಾ ಗಡಗಿ, ಅಶೋಕ ಸೇಡಂಕರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದಾರೆ.
![](https://karnataka1news.com/wp-content/uploads/2023/07/IMG-20230718-WA0062-1024x576.jpg)