ವಿಜಯಪುರ: ಅಕ್ರಮವಾಗಿ ಮದ್ಯ ಸಾಗಾಟ ಸಾಬೀತು ಹಿನ್ನೆಲೆ ಆರೋಪಿಗೆ ಎರಡು ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಿ ವಿಜಯಪುರ ಜಿಲ್ಲೆಯ ಇಂಡಿ ಜೆಎಂಎಫ್ಸಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
ಮನೋಹರ ತಾರಾಸಿಂಗ್ ಚವ್ಹಾಣ ಶಿಕ್ಷೆಗೊಳಗಾದವರು. ಇನ್ನು 7-12-2020 ರಂದು ಇಂಡಿ ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ವೇಳೆ ಅಬಕಾರಿ ಪೊಲೀಸ ಮಲ್ಲಪ್ಪ ಪಡಸಲಗಿ ನೇತೃತ್ವದ ತಂಡ ದಾಳಿಗೈದು ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ಇನ್ನೂ ವಾದ ವಿವಾದಗಳನ್ನು ಆಲಿಸಿದ ಜೆಎಂಎಫ್ಸಿ ನ್ಯಾಯಾಧೀಶರಾದ ಈಶ್ವರ ಎಸ್ಎಂ ಅವರು ಆರೋಪಿಗೆ ದಂಡ ಹಾಗೂ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಇಬ್ರಾಹಿಂ ಗಚ್ಚಿಮಹಲ್ ವಾದ ಮಂಡಿಸಿದರು.