ವಿಜಯಪುರ: ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ ಜೋರಾಗಿಯೇ ನಡೆಯುತ್ತಿದ್ದು, ಪೊಲೀಸರು ದಾಳಿ ನಡೆಸುತ್ತಿದ್ದಂತೆ ದಂಧೆ ಕೋರರು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಸಮೀಪದ ಭೀಮಾ ನದಿ ದಡದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಯಾಂತ್ರೀಕೃತ ಬೋಟ್ ಬಳಸಿ ಮರಳು ಎತ್ತುತ್ತಿದ್ದ ಮಾಹಿತಿ ತಿಳಿದು ಝಳಕಿ ಪಿಎಸೈ ಎಸ್.ಡಿ. ಯಡಹಳ್ಳಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಟಿಪ್ಪರ್, ಬೋಟ್ ಹಾಗೂ ಸಂಬಂಧಿಸಿದ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ದಂಧೆಕೋರರು ಪರಾರಿಯಾಗಿದ್ದಾರೆ.
ಬೋಟ್ಗಳು ಅಹಿರಸಂಗ ಗ್ರಾಮದ ಸೈಫನ್ಸಾಬ ಮಕಾಂದಾರ ಹಾಗೂ ಧೂಳಖೇಡ ಗ್ರಾಮದ ಸೂರಜಗೌಡ ಬಿರಾದಾರ ಎಂಬುವರಿಗೆ ಸೇರಿದ್ದು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ಹಾಗೂ ಮಾಲೀಕನನ್ನು ವಿಚಾರಿಸಿದ್ದು ಆತನ ಮೇಲೆಯೂ ಪ್ರಕರಣ ದಾಖಲಾಗಿದೆ. ಒಟ್ಟು 4.13 ಲಕ್ಷ ರೂ.ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.