ವಿಜಯಪುರ: ಭೀಮಾತೀರದಲ್ಲಿ ಮತ್ತೆ ಅಕ್ರಮ ಮರಳು ದಂಗೆಕೋರರ ಹಾವಳಿ ಹೆಚ್ಚಾಗಿದೆ. ಹೌದು.. ಭೀಮಾತೀರದಲ್ಲಿ ರಾತ್ರಿಯಾದರೇ ಜೆಸಿಬಿ, ಟ್ರ್ಯಾಕ್ಟರ್, ಲಾರಿಗಳದ್ದೆ ಸದ್ದು ಕೇಳಿಬರುತ್ತದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಭೀಮಾತೀರದ ಬಗಲೂರು, ಶಂಬೆವಾಡ, ಶಿರಸಗಿ ಸುತ್ತಮುತ್ತ ಅಕ್ರಮ ಮರಳು ದಂಧೆ ಜೋರಾಗಿದೆ. ಅಕ್ರಮ ಕಣ್ಣೆದುರೆ ನಡೆಯುತ್ತಿದ್ರು ಪೊಲೀಸರು ಸುಮ್ಮನೆ ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿವೆ.
ರಾತ್ರಿ 10 ಗಂಟೆ ಶುರುವಾಗುವ ಅಕ್ರಮ ಮರಳು ದಂಧೆ ನಸುಕಿನ ಜಾವ 5 ಗಂಟೆ ವರೆಗು ಭೀಮಾನದಿಯ ಮರಳನ್ನು ದಂಧೆಕೋರರು ಸಾಗಾಟ ಮಾಡುತ್ತಾರೆ. ಅಲ್ಲದೇ, ಅಕ್ರಮ ದಂಧೆಯ ವರದಿ ಮಾಡಿದ ಪತ್ರಕರ್ತನನ್ನೆ ಪೊಲೀಸರು ಕಿಡ್ನಾಪ್ ಮಾಡಿ ಬೆದರಿಸಿದ್ರಾ ಎಂದು ಗಂಭೀರ ಆರೋಪ ಕೇಳಿಬಂದಿದೆ. ಸಿಂದಗಿ ಗುಂಡು ಕುಲಕರ್ಣಿ ಎಂಬ ಸ್ಥಳೀಯ ಪತ್ರಕರ್ತನನ್ನ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ್ ಹಾಗೂ ಸಿಬ್ಬಂದಿ ಸುರೇಶ ಕೊಂಡಿಯಿಂದ ಕಿಡ್ನಾಪ್ ಮಾಡಿ, ಭೀಮಾತೀರದ ಘತ್ತರಗಿ ಬ್ರೀಡ್ಜ್ ಮೇಲೆ ಕೊಂಡೊಯ್ದು ಹಣೆಗೆ ಬಂದೂಕಿಟ್ಟು ಬೆದರಿಸಿದ ಸಿಪಿಐ ನಾನಾಗೌಡ ಪೊಲೀಸ್ಪಾಟೀಲ್??ಕಂಟ್ರಿಪಿಸ್ತೂಲ್ ಹಣೆಗಿಟ್ಟು ಸಿಪಿಐ ನಾನಾಗೌಡನಿಂದ ಜೀವಬೆದರಿಕೆ ಆರೋಪ ಹಿನ್ನಲೆ ಜಿಲ್ಲಾಧಿಕಾರಿಗಳಿಗೆ ಪತ್ರಕರ್ತ ಗುಂಡು ದೂರು ನೀಡಿದ್ದಾರೆ.
ಒಂದು ಮರಳು ಟ್ರಾಕ್ಟರ್ನಿಂದ ದಿನಕ್ಕೆ 8 ಸಾವಿರ, 50ಕ್ಕು ಟ್ರಾಕ್ಟರ್ಗಳಿಂದ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ, ಗೃಹ ಇಲಾಖೆ ಕಾರ್ಯದರ್ಶಿ, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಗುಂಡು ಕುಲಕರ್ಣಿ ದೂರು ನೀಡಿದ್ದಾರೆ.
ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ | ಪತ್ರಕರ್ತನ ಕಿಡ್ನ್ಯಾಪ್ | ದೂರು ಸಲ್ಲಿಕೆ
![](https://karnataka1news.com/wp-content/uploads/2024/05/IMG-20240529-WA0052.jpg)