ವಿಜಯಪುರ: ಅಕ್ರಮವಾಗಿ ಟಿಪ್ಪರನಲ್ಲಿ ಮರಳು ಸಾಗಾಟ ಮಾಡುತ್ತಿದ್ದ ವೇಳೆಯಲ್ಲಿ ಪೊಲೀಸರು ಹಾಗೂ ತಹಶೀಲ್ದಾರ ನೇತೃತ್ವದಲ್ಲಿ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ತಾಳಿಕೋಟೆ ವಿಜಯಪುರ ರಸ್ತೆಯಲ್ಲಿ ನಡೆದಿದೆ.
ಸೋಮ್ಮು ಲಕ್ಕಪ್ಪ ಕಲಬುರಗಿ ಬಂಧಿತ ಆರೋಪಿ. ತಾಳಿಕೋಟೆಯಿಂದ ಬಸವನಬಾಗೇಬಾಡಿ ಮರಳು ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಪೊಲೀಸರು ದಾಳಿಗೈದಿದ್ದಾರೆ. 25 ಸಾವಿರ ಮೌಲ್ಯದ ಏಳು ಬ್ರಾಸ್ ಮರಳು, 40 ಲಕ್ಷ ಮೌಲ್ಯದ ಒಂದು ಟಿಪ್ಪರ ಪೊಲೀಸರು ಜಪ್ತಿಗೈದಿದ್ದಾರೆ. ತಾಳಿಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.