ವಿಜಯಪುರ: ಜೈಲಿನಲ್ಲಿ ಇದ್ದುಕೊಂಡು ಸಾಕ್ಷಿದಾರರಿಗೆ ಇಬ್ಬರು ಸಾಕ್ಷಿ ಹೇಳದಂತೆ ಒತ್ತಡ ಹಾಕುತ್ತಿರುವ ಘಟನೆ ವಿಜಯಪುರ ನಗರದ ದರ್ಗಾ ಜೈಲಿನಲ್ಲಿ ನಡೆದಿದೆ. ರೌಫ್ ಶೇಖ್ ಹಾಗೂ ಅತೀಫ್ ಅಬ್ರಾರ್ ಶೇಖ್ ಸಾಕ್ಷಿದಾರರಿಗೆ ಒತ್ತಡ ಹಾಕಿದ್ದಾರೆ. ಇನ್ನು ರಿಯಾಜ್ ಅಹ್ಮದ್ ಕೂಡಗಿ ಪುತ್ರ ಮುಸ್ತಕೀಮ ಕೂಡಗಿನ್ನು ಐವರು ಹತ್ಯೆಗೈದಿದ್ದರು. ಆದ್ರೇ, ಐವರು ಪೈಕಿ ಮೂವರಿಗೆ ಜಾಮೀನು ಆಗಿದೆ. ಉಳಿದ ಇಬ್ಬರು ಆರೋಪಿಗಳು ಜೈಲಿನಲ್ಲಿ ಇದ್ದಾರೆ. ಅದಕ್ಕಾಗಿ ಸಾಕ್ಷಿದಾರರಿಗೆ ಸಾಕ್ಷಿ ಹೇಳದಂತೆ ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ರಿಯಾಜ್ ಅಹ್ಮದ್ ಕೂಡಗಿ ಕೇಸ್ ನೀಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/09/IMG_20221213_121818-1024x563.jpg)