ಬೆಂಗಳೂರು: ಅಕ್ರಮವಾಗಿ ಗಾಂಜಾ ಹಾಗೂ ಕ್ರಿಸ್ಟಲ್ ಮೇಥ್ ಮಾರಾಟಕ್ಕೆ ಯತ್ನಿಸಿರುವ ವೇಳೆಯಲ್ಲಿ ಅಬಕಾರಿ ಪೊಲೀಸರು ದಾಳಿಗೈದು ಆರೋಪಿ, ವಸ್ತುಗಳನ್ನು ಜಪ್ತಿಗೈದಿರುವ ಘಟನೆ ಬೆಂಗಳೂರಿನ ಮಹದೇವಪುರ ವಲಯದ ಕುಂದಲಹಳ್ಳಿ ಗೇಟ್ ಬಳಿ ನಡೆದಿದೆ.
ಕೇರಳದ ಆಲಪ್ಪುಳ್ ಮೂಲದ ಸಿಬಿ ಕೆಜೆ ಬಂಧಿತ ಆರೋಪಿ. ಅಕ್ರಮವಾಗಿ ಮಾರಾಟಕ್ಕೆ ತಂದಿದ್ದ 1.40 ಲಕ್ಷ ಮೌಲ್ಯದ 17 ಗ್ರಾಂ METHAMPHETAMINE (CRYSTAL METH) ಮತ್ತು 690 ಗ್ರಾಂ ಒಣಗಿದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಅಬಕಾರಿ ಜಂಟಿ ಆಯುಕ್ತ ಎಎಲ್ ನಾಗೇಶ್, ಉಪ ಆಯುಕ್ತ ವೀರಣ್ಣ ಬಾಗೇವಾಡಿ ಮತ್ತು ಉಪವಿಭಾಗದ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಎ.ಎ. ಮುಜಾವರ್ ನೇತೃತ್ವದಲ್ಲಿ ದಾಳಿಗೈದು ಆರೋಪಿ ವಿರುದ್ಧ NDPS ಕಾಯ್ದೆ 1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.