ಹುಬ್ಬಳ್ಳಿ: ಹೊಸ ವರ್ಷದ ಹಿಂದಿನ ದಿನ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ APMC ರಸ್ತೆಯಲ್ಲಿರುವ ವೈಭನಗರದ ನಿವಾಸಿ ಸಹದೇವಪ್ಪ ಸಿದ್ದಪ್ಪ ಹೊಸಮನಿ ಎನ್ನುವರ ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಖದೀಮನನ್ನು ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ ತಿಂಗಳ 30ನೆ ತಾರಿಕಿನಂದು ಕಳ್ಳತನ ನಡೆದಿದ್ದು ಈ ಕುರಿತು ಮನೆಯ ಮಾಲೀಕರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನು ಬಿದ್ದಿದ್ದ ಇನ್ಸಪೆಕ್ಟರ್ ರಮೇಶ್ ಗೋಕಾಕ್ ತಂಡ ಕ್ರೈಮ್ ಸಿಬ್ಬಂದಿಗಳಾದ ಎಸ್. ಎಮ್. ಹೊನ್ನಪ್ಪನವರ, ಚಂದ್ರು ಜನಗಣ್ಣವರ, ಮಾಂತೇಶ ನಾನಾಗೌಡ, ಉದೀಶ ತಿಪ್ಪಣ್ಣವರ, ಸಂಗಮೇಶ ಕಾರ್ಯಚರಣೆ ನಡೆಸಿ ಟಿಪ್ಪು ಸುಲ್ತಾನ್ @ಸುಲ್ತಾನ್ ಬೆಪಾರಿ ಎನ್ನುವ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆರೋಪಿ ಸುಲ್ತಾನ್ ಕಡೆಯಿಂದ ಗ್ರಾಮೀಣ ಪೊಲೀಸರು ಬಂಗಾರದ ಚೈನ್ ಹಾಗೂ ಉಂಗುರಗಳು,ಸೋನಿ ಕಂಪನಿಯ 32 ಇಂಚಿನ ಟಿವಿ,ಒಂದು ಬೈಕ್ ಸೇರಿದಂತೆ ಕಳ್ಳತನ ಮಾಲನ್ನು ವಶಪಡಿಸಿಕೊಂಡು ಜಿಲ್ಲಾ ವರಿಷ್ಠಾಧಿಕಾರಿಗಳ ಕಡೆಯಿಂದ ಸೈ ಎನಿಸಿಕೊಂಡಿದ್ದಾರೆ.