ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಕಲಹ ಹಿನ್ನಲೆ ಎರಡು ಕುಟುಂಬಗಳ ಮಧ್ಯೆ ಕಲ್ಲು ಹಾಗೂ ಚಾಕು ಹಿಡಿದು ಹಲ್ಲೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ನರಸಲಗಿ ಗ್ರಾಮದ ಎಲ್ ಟಿ ತಾಂಡಾದಲ್ಲಿ ನಡೆದಿದೆ.
ಧನಸಿಂಗ್ ರಾಠೋಡ ಮೇಲೆ ಶೇಕುಬಾಯಿ ರಾಠೋಡ, ರೋಹಿತ್ ರಾಠೋಡ ಹಲ್ಲೆಗೈದಿರುವ ಬಗ್ಗೆ ವಿನೋದ ರಾಠೋಡ ಆರೋಪಿಸಿದ್ದಾರೆ. ಇನ್ನೂ ಕಲ್ಲು, ಚಾಕು ಹಿಡಿದುಕೊಂಡು ಹಲ್ಲೆಗೆ ಮುಂದಾಗಿರುವ ವಿಡಿಯೋ ಲಭ್ಯವಾಗಿದೆ. ಮತ್ತೊಂದೆಡೆ ಶಕುಂತಲಾ ರಾಠೋಡ ಮನೆಗೆ ಮೂವರು ನುಗ್ಗಿ ಮನೆಯಲ್ಲಿದ್ದ ಟೈಲ್ಸ್, ಸಿಸಿಟಿವಿ, ಟಿವಿ ಹಾನಿ ಮಾಡಿದ್ದಾರೆ.
ಧನಸಿಂಗ್ ರಾಠೋಡ, ಸತೀಶ ರಾಠೋಡ, ನೀಲಪ್ಪ ರಾಠೋಡನಿಂದ ಹಾನಿಯಾಗಿದೆ ಎಂದು ಕುಮಾಲ್ ರಾಠೋಡ ಆರೋಪಿಸಿದ್ದಾರೆ. ಇನ್ನು ಪೊಲೀಸ ತನಿಖೆಯ ಬಳಿಕ ಸತ್ಯಾಸತ್ಯೆತೆ ತಿಳಿದು ಬರಬೇಕಿದೆ. ಬಸವನಬಾಗೇಬಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.