ಬೆಳಗಾವಿ: ಖಾನಾಪೂರ ತಾಲೂಕಿನ ಗಡಿ ಗ್ರಾಮವಾದ ಗೋದೋಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾಗಿದ್ದು, ರೈತರ ಬೆಳೆ ನಾಶದ ಆತಂಕಲ್ಲಿರುವ ರೈತರು ಅಲ್ಲದೆ ಸುಮಾರು 7-8 ಕಾಡಾನೆಗಳ ಹಿಂಡಿನಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಬುಧವಾರ ಬೆಳಿಗ್ಗೆ ಖಾನಾಪೂರ ತಾಲೂಕಿನ ಗೋದೊಳಿ ಗ್ರಾಮದ ರೈತರ ಜಮೀನಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡನ್ನು ಹಿಮ್ಮಟ್ಟಿಸುವಲ್ಲಿ ರೈತರ ಸಹಾಯದಿಂದ ಕಿತ್ತೂರು ಗೊಳ್ಳಿಹಳ್ಳಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಕಾಡನೆಗಳನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.