ಬೆಳಗಾವಿ: ಫಬ್ರವರಿ ಎರಡನೇ ತಾರೀಖಿನಂದು ತಮ್ಮ ಹುಟ್ಟು ಹಬ್ಬವನ್ನು ಸಂತರ ಪರಂಪರೆಯಂತೆ ವಾರ್ಕರಿ ದಿನವಾಗಿ ಆಚರಿಸಲು ತೀರ್ಮಾನಿಸಿದ್ದೇನೆ ಎಂದು ಖಾನಾಪುರ ಜೆಡಿಎಸ್ ಅಭ್ಯರ್ಥಿ ನಾಸೀರ್ ಭಾಗವಾನ್ ತಿಳಿಸಿದರು. ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಯಾವುದೇ ಜಾತಿಗೆ ಸೀಮಿತವಾದವನಲ್ಲ. ನಾನು ಜಗತ್ಯೋತಿ ಬಸವಣ್ಣನವರ ಅನುಯಾಯಿ. ಅದರಂತೆ ಸರ್ವಧರ್ಮ ಸಮಾನವೆಂದು ಬದುಕುತ್ತಿದ್ದೇನೆ ಆದ ಕಾರಣ ನನ್ನ ಹುಟ್ಟು ಹಬ್ಬದಂದು ಕೀರ್ತನೆ ಮತ್ತು ಲಾವಣಿ ಕಾರ್ಯಕ್ರಮ ಏರ್ಪಡಿಸಿದ್ದು ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಆಗಮಿಸುತ್ತಾರೆ. ಅಲ್ಲದೇ, ತಾಲೂಕಿನ ಸಾವಿರಾರು ಜನ ಸೇರುವ ನಿರೀಕ್ಷೆ ಇದೆ ಎಂದರು.
ಫೆಬ್ರುವರಿ ಎರಡರ ಬೆಳಗ್ಗೆ ಜಗಜ್ಯೋತಿ ಬಸವೇಶ್ವರ, ಡಾ.ಬಾಬಾಸಾಹೇಬ ಅಂಬೇಡ್ಕರ್ ಮತ್ತು ಕ್ಷತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಾರಂಭವಾಗುವ ಮೆರವಣಿಗೆ ನಂತರ ಪಟ್ಟಣದ ಮಲಪ್ರಭಾ ಕ್ರೀಡಾಂಗಣಕ್ಕೆ ಸಾಗುವದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕಾ ಅಧ್ಯಕ್ಷ ಎಮ್ಎಮ್.ಸಾಹುಕಾರ, ಮಹಿಳಾ ಜಿಲ್ಲಾಧ್ಯಕ್ಷರಾದ ಮೇಘಾ ಕುಂದರಗಿ,ವಿಶಾಲ್ ಪಾಟೀಲ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.