ವಿಜಯಪುರ: ಜೇವರ್ಗಿ ಜೆಸ್ಕಾಂ ಇಲಾಖೆಯ ಅಧಿಕಾರಿ ಹತ್ಯೆಗೈದಿದ್ದ ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜೆಸ್ಕಾಂ ಇಲಾಖೆಯ ಜೇವರ್ಗಿ ಸೆಕ್ಷನ್ ಆಫೀಸರ್ ರಾಜಶೇಖರ ಚೆಡ್ಡಿ(35) ಕೊಲೆ ಪ್ರಕರಣವನ್ನು ಆಲಮೇಲ ಠಾಣೆ ಪೊಲೀಸರು ಭೇದಿಸಿದ್ದಾರೆ.
ಕಿಡ್ನಾಪ್ ಮಾಡಿ, 50ಲಕ್ಷಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದಾಗ ವಿಚಿತ್ರ ರೀತಿಯಲ್ಲಿ ಏಳು ಜನ ಆರೋಪಿಗಳ ಬಂಧನ ಮಾಡಲಾಗಿದೆ.
ಯಶವಂತ ಮೇಲಕೇರಿ, ಶ್ರೀಶೈಲ ಜಮಾದಾರ, ಶಿವಕುಮಾರ ಗುತ್ತೇದಾರ, ಸುಧಾಕರ ಮದಗುಣಕಿ, ಬಾಬುರಾವ ಸಮಗಾರ, ಭೀಮಾಶಂಕರ ಪಾಟೀಲ್, ಶಿವಾನಂದ ಕಮ್ಮಾನ ಬಂಧಿತ ಆರೋಪಿಗಳು.
ಆಲಮೇಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.