ವಿಜಯಪುರ: ಬಸವಣ್ಣನ ಜನಿಸಿದ ಸ್ಥಳಕ್ಕೆ ನಾನು ನಮಿಸುವೆ ಎಂದು ವಿಜಯಪುರದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇಮಾನಿ ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದೊಂದು ಭಾರತದಲ್ಲಿ ಅತ್ಯಂತ ಕಳಂಕಿತ ಪ್ರಕರಣ ಆಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ಜೆಪಿ ನಡ್ಡಾ, ಅಮಿತಾ ಶಾ, ಮೋದಿ ಎಲ್ಲರಿಗೂ ಇದು ಮೊದಲೇ ಗೊತ್ತಿತ್ತು. ಆದರೂ ಪ್ರಜ್ವಲ್ ನಿಗೆ ಟಿಕೆಟ್ ಕೊಟ್ಟರು. ಪ್ರಜ್ವಲ್ ರೇವಣ್ಣ ಹೆಗಲ ಮೇಲೆ ಕೈಹಾಕಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ್ರು. ದಿಲ್ಲಿಯಲ್ಲಿ ಅಥ್ಲೇಟಿಕ್ಸ್ ಮೇಲೆ ಅತ್ಯಾಚಾರದ ವಿಚಾರವಾಗಿ ಮಹಿಳೆಯರು ಪ್ರತಿಭಟನೆ ಮಾಡಿದ್ರು. ಆಗ ಅದನ್ನು ಮೋದಿ ಕೇಳಲಿಲ್ಲ. ಮಣಿಪುರದಲ್ಲಿ ಮಹಿಳೆ ನಗ್ನ ಮಾಡಿ ಓಡಾಡಿಸಿದ್ರು. ದೇಶದ ಪ್ರಧಾನಿ ಒಂದೇ ಒಂದು ಮಾತನಾಡಲಿಲ್ಲ. ಮೇಘಾಲಯ ಬಿಜೆಪಿ ಪಾರ್ಟಿಯ ಉಪಾಧ್ಯಕ್ಷ ಓರ್ವ ರೆಸಾರ್ಟ್ ನಡೆಸುತ್ತಿದ್ದ. ಅಲ್ಲಿ ಪೋಲಿಸರು ರೇಡ್ ಮಾಡಿದಾಗ 18 ವರ್ಷದೊಳಗಿನ 6 ಬಾಲಕಿಯರು ಅಲ್ಲಿ ಸಿಕ್ಕರು. ಆರ್ ಎಸ್ ಎಸ್ ಹಾಗೂ ಬಿಜೆಪಿಯ ಮುಖಂಡರು ಬಲಾತ್ಕಾರ ಮಾಡಲು ಆ ರೆಸಾರ್ಟ್ ಬಳಕೆ ಮಾಡುತ್ತಿದ್ದರೆಂದು ಜಿಗ್ನೇಶ್ ಮೇವಾನಿ ಗಂಭೀರ ಆರೋಪ ಮಾಡಿದ್ದರು. ಭಾರತೀಯ ಜನತಾ ಪಾರ್ಟಿ ಅಲ್ಲ. ಇದು ಬಲಾತ್ಕಾರಿಗಳ ಪಾರ್ಟಿ ಇದೆ ಎಂದು ಕಿಡಿಕಾರಿದರು. ಗುಜರಾತ್ ನಲ್ಲಿ 40 ಸಾವಿರ ಮಹಿಳೆಯರು ನಾಪತ್ತೆ ಆಗಿದ್ದಾರೆ. ಆದರೆ ಅವರು ಎಲ್ಲಿ ಹೋದರು ಅನ್ನುವುದು ಗೊತ್ತಾಗಿಲ್ಲ. ಮೋದಿ ಅವರ 10 ವರ್ಷದ ಆಡಳಿತದಲ್ಲಿ ಸಾವಿರಾರು ಮಹಿಳೆಯರು ನಾಪತ್ತೆಯಾದ್ರೂ ಅವರೆಲ್ಲಿ ಹೋದರು? ಲಿಂಗಾಯತರು ಹಾಗೂ ದಲಿತರು ನಿಮ್ಮಷ್ಟಕ್ಕೆ ನೀವು ಜಗಳಾಡಾಬಾರದು. ಅಮಿತಾ ಶಾ ತಮ್ಮ ಮಗನಿಗೆ ಬಿಸಿಸಿಐ ಅಧ್ಯಕ್ಷ ಮಾಡಿದರೆ.
ಆದರೆ ಇನ್ನುಳಿದ ಕಾರ್ಯಕರ್ತರಿಗೆ ತಲ್ವಾರ್ ಕೊಟ್ಟು ಹೊಡೆದಾಡಲು ಬಿಡುತ್ತಾರೆ. ಆರ್ ಎಸ್ ಎಸ್ , ಬಿಜೆಪಿಗರು ನಿರುದ್ಯೋಗದ ವಿಚಾರವಾಗಿ ಮಾತನಾಡಲಿ. ಗುಜರಾತ್ ಗಿಂತ 100 ಪಟ್ಟು ಸಿದ್ದರಾಮಯ್ಯ ಸರ್ಕಾರ ಉತ್ತಮವಾಗಿದೆ. ಪ್ರಜ್ವಲ್ ರೇವಣ್ಣ ವಿಚಾರವಾಗಿ ಇಡೀ ವಿಶ್ವಕ್ಕೆ ಗೊತ್ತಾಗಲಿ. ಬಲಾತ್ಕಾರಿಗಳಿಗೆ ಯಾರು ಮತ ಹಾಕುತ್ತಾರೆ ಎಂದು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಸೋಲ್ತಾರೆ. ಅಬ್ ಕಿ ಬಾರ್ ಚಾರ್ ಸೋ ಪಾರ್ ಅನ್ನುವಂತದ್ದು ಈ ಬಾರಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ಬಸವಣ್ಣನ ಜನ್ಮಸ್ಥಳದ ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದರು.